ಪ್ರಜಾಸ್ತ್ರ ಸುದ್ದಿ
ನವದೆಹಲಿ: ಲಾಕ್ ಡೌನ್ ನಡುವೆಯೂ ಕರೋನಾ ಕಂಟ್ರೋಲ್ ಮಾಡುವಲ್ಲಿ ವಿಫಲವಾದ ದೇಶ ಭಾರತ ಎಂದು, ಸಂಸದ ರಾಹುಲ ಗಾಂಧಿ ಆರೋಪಿಸಿದ್ದಾರೆ. ಅಲ್ದೇ, ಕರೋನಾ ಹೆಚ್ಚುತ್ತಿರುವ ಟೈಂನಲ್ಲಿ ಲಾಕ್ ಸಡಿಲಿಕೆ ಮಾಡಿರುವ ಏಕೈಕ ದೇಶವೆಂದು ವಾಗ್ದಾಳಿ ನಡೆಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ನಾಡಿದ ರಾಹುಲ ಗಾಂಧಿ, ದೇಶದಲ್ಲಿ ಕರೋನಾ ನಿಯಂತ್ರಣಕ್ಕೆ ನಾಲ್ಕು ಬಾರಿ ಲಾಕ್ ಡೌನ್ ಘೋಷಿಸಿ ವಿಫಲವಾಗಿದ್ದಾರೆ. ವೈರಸ್ ಹೆಚ್ಚುತ್ತಿರುವ ಸಮಯದಲ್ಲಿ ಸಡಿಲಿಕೆ ಮಾಡಿ, ಅಂದು ತೆರೆಯ ಮುಂದೆ ಇದ್ದ ಪ್ರಧಾನಿ ಇದೀಗ ತೆರೆಯ ಹಿಂದಕ್ಕೆ ಸರೆದಿದ್ದಾರೆ ಎಂದು ಕಿಡಿ ಕಾರಿದ್ದಾರೆ.
21 ದಿನಗಳಲ್ಲಿ ಕರೋನಾ ಕಂಟ್ರೋಲ್ ಮಾಡುವುದಾಗಿ ಹೇಳಿದ ಪ್ರಧಾನಿ ಹೇಳಿದ್ರು. ಆದ್ರೆ, 60 ದಿನಗಳಾದ್ರೂ ಸೋಂಕು ಹೆಚ್ಚಾಗ್ತಿದೆ. ಲಾಕ್ ಡೌನ್ ಉದ್ದೇಶ ವಿಫಲವಾಗಿದೆ. 20 ಲಕ್ಷ ಕೋಟಿ ಪ್ಯಾಕೇಜಿನಿಂದ ಯಾರಿಗೂ ನಯಾಪೈಸಾ ಸಿಗಲ್ಲ. ಇದಾದ್ಮೇಲೆ ಎನ್ ಡಿಎ ಸರ್ಕಾರದ ಮುಂದಿನ ದಾರಿ ಏನು ಅನ್ನೋದು ಸ್ಪಷ್ಟಪಡಿಸಬೇಕು ಎಂದು ರಾಹುಲು ಗಾಂಧಿ ಒತ್ತಾಯಿಸಿದ್ದಾರೆ.