ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಜಿಲ್ಲೆಯಲ್ಲೇ ಪ್ರಸಿದ್ಧವಾದ ಗೋಕಾಕ್ ಫಾಲ್ಸ್ ನೋಡಲು ಸ್ನೇಹಿತರೊಂದಿಗೆ ಶನಿವಾರ ಹೋಗಿದ್ದ ಯುವಕನೊಬ್ಬ ಬರೋಬ್ಬರಿ 140 ಅಡಿ ಆಳದ ಕಂದಕ್ಕೆ ಸಂಜೆ ಬಿದ್ದಿದ್ದಾನೆ. ಸ್ನೇಹಿತರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಅವರು ಬಂದು ಕಾರ್ಯಾಚರಣೆ ನಡೆಸಿದ್ದಾರೆ. ಆದ್ರೆ, ರಾತ್ರಿಯಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿ ಸ್ಥಗಿತಿಗೊಳಿಸಿದ್ದಾರೆ.
140 ಅಡಿ ಆಳಕ್ಕೆ ಬಿದ್ದ ಪ್ರದೀಪ್ ಸಾಗರ್ ಅನ್ನೋ ಯುವಕನಿಗೆ ಅನಾಹುತವಾಗಿದೆ ಎಂದುಕೊಂಡವರಿಗೆ ಅಚ್ಚರಿ ಎಂಬಂತೆ, ಇಂದು ಬೆಳಗಿನ ಜಾವ 4 ಗಂಟೆಗೆ ಪ್ರದೀಪ್ ಸಾಗರ್ ಸ್ನೇಹಿತರಿಗೆ ಫೋನ್ ಮಾಡಿದ್ದಾನೆ. ನಾನು ಇನ್ನು ಬದುಕಿದ್ದೇನೆ. ರಕ್ಷಿಸಿ ಎಂದು ಕೇಳಿಕೊಂಡಿದ್ದಾನೆ. ತಕ್ಷಣ ಅವರೆಲ್ಲ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಜೊತೆಗೆ ಮಾತ್ನಾಡಿ, ಸ್ಥಳಕ್ಕೆ ಬಂದು ರಕ್ಷಿಸಿದ್ದಾರೆ.
ಪ್ರಾಣಾಪಯದಿಂದ ಪಾರಾಗಿ ಬಂದಿರುವ ಪ್ರದೀಪ್ ಸಾಗರನಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಎಲ್ಲರಲ್ಲೂ ಸಂತಸ ಮನೆ ಮಾಡಿದೆ.