ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ: ಇಲ್ಲೊಂದು ಮದ್ವೆ ನಡೆದಿದೆ. ಚಪ್ಪರ ಇಲ್ಲ. ವೇದಿಕೆಯಿಲ್ಲ. ಹೂವು, ಹಾರ, ತೂರಾಯಿ ಇಲ್ಲ. ಮಂತ್ರಘೋಷ, ಊಟ ಮತ್ತೊಂದು ಮಗದೊಂದು ಯಾವುದೂ ಇಲ್ಲದೆ. ರಸ್ತೆ ಮಧ್ಯೆ ಸಿಂಪಲ್ ಮದ್ವೆಯಾಗಿದೆ. ಕರೋನಾ ಹಾವಳಿ ಟೈಂನಲ್ಲಿ ಇನ್ನು ಏನೇನು ಯಾವ ಯಾವ ರೀತಿಯಲ್ಲಿ ಮದುವೆ ನಡೆಯುತ್ತೆ ಗೊತ್ತಿಲ್ಲ. ಜಿಲ್ಲೆಯ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಶಿವಮೊಗ್ಗ ಮೂಲದ ಹುಡ್ಗಿ, ಕೇರಳ ಮೂಲದ ಹುಡ್ಗನ ಮದ್ವೆಯಾಗಿದೆ.
ಕರೋನಾ ಲಾಕ್ ಡೌನ್ ಟೈಂನಲ್ಲಿ ನಿಶ್ಚಿತಾರ್ಥವಾಗಿತ್ತು. ಇದೀಗ ಶ್ರಾವಣಮಾಸ ಶುರುವಾಗಿರುವುದ್ರಿಂದ, ಕುಟುಂಬಸ್ಥರ ಒಪ್ಪಿಗೆ ಪಡೆದು ರಸ್ತೆ ನಡುವೆ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೇರಳ ಗಡಿಭಾಗದಲ್ಲಿರುವ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಸಂರಕ್ಷಿತಾರಣ್ಯದ ಮೂಲೆಹೊಳೆಯಲ್ಲಿ ಮಂಗಳವಾರ ಈ ಜೋಡಿಯ ಮದ್ವೆಯಾಗಿದೆ. ಬಸ್ ನಲ್ಲಿ ಹೋಗ್ತಿದ್ದ ಪ್ರಯಾಣಿಕರು, ವಾಹನ ಸವಾರರು ವಿಡಿಯೋ ಮಾಡಿದ್ದಾರೆ. ಸಂಬಂಧಿಕರು, ಅರಣ್ಯ ಇಲಾಖೆ ಪೊಲೀಸರು, ಸ್ನೇಹಿತರು ನವಜೋಡಿಗೆ ಶುಭ ಕೋರಿದ್ದಾರೆ.