ಪ್ರಜಾಸ್ತ್ರ ಸುದ್ದಿ
ಛತ್ತೀಸಗಡ: ವಿದೇಶದಲ್ಲಿ ಬೆತ್ತಲೆ ಪ್ರತಿಭಟನೆ ನಡೆಯುವ ವಿಚಾರವನ್ನು ಕೇಳಿದ ಭಾರತೀಯರು ಇದೀಗ ತಮ್ಮ ನೆಲದಲ್ಲಿಯೇ ಬೆತ್ತಲೆ ಪ್ರತಿಭಟನೆ ನೋಡುವ ಸ್ಥಿತಿ ಬಂದಿದೆ. ಕಾರಣ, ನಕಲಿ ಜಾತಿ ಪ್ರಮಾಣ ಪತ್ರದ ಮೂಲಕ ಸರ್ಕಾರಿ ನೌಕರಿ ಪಡೆಯುತ್ತಿರುವ ವಿಚಾರಕ್ಕೆ.
ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಯಪುರದಲ್ಲಿ ಯುವಕರ ಗುಂಪೊಂದು ನಕಲಿ ಜಾತಿ ಪ್ರಮಾಣ ಪತ್ರದ ಮೂಲಕ ಸರ್ಕಾರಿ ನೌಕರಿ ಪಡೆದವರ, ಡೆಯುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಬೆತ್ತಲೆ ಪ್ರತಿಭಟನೆ ನಡೆಸಿದರು.
ಬೋರ್ಡ್ ಹಿಡಿದುಕೊಂಡು ಬೆತ್ತಲೆಯಾಗಿ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದರು. ರಾಜ್ಯ ಆಯೋಗ ನಕಲಿ ಜಾತಿ ಪ್ರಮಾಣಪತ್ರದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು ಆಕ್ರೋಶ ಹೊರ ಹಾಕಿದರು.