ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡರು ನಡೆಸಿದ ಪುಂಡಾಟಕ್ಕೆ ಬ್ರೇಕ್ ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ದೇಶಭಕ್ತರ ಪ್ರತಿಮೆಗೆ ಅವಮಾನ ಸಹಿಸಲ್ಲ ಎಂದರು.
ಪ್ರತಿಮೆ ಧ್ವಂಸದ ಹಿಂದೆ ಬೇರೆಯದೆಯಾದ ಉದ್ದೇಶವಿದೆ. ದೇಶಭಕ್ತರ ಪ್ರತಿಮೆ ಧ್ವಂಸಗೊಳಿಸುವುದು ಅಪರಾಧ. ಅಂತಹ ಪುಂಡರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಇನ್ನು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.