ಮನೆಗಳಿಗೆ ನುಗ್ಗಿದ ಮಳೆ ನೀರು

228

ಪ್ರಜಾಸ್ತ್ರ ಸುದ್ದಿ

ಮಂಡ್ಯ: ರಾಜ್ಯದ ತುಂಬಾ ಭರ್ಜರಿಯಾಗಿ ಮಳೆಯಾಗುತ್ತಿದೆ. ಈಗಾಗ್ಲೇ ನೆರೆ ಪರಿಸ್ಥಿತಿ ಎದುರಿಸಿ ಸ್ವಲ್ಪ ಸುಧಾರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರೆದಿದ್ದು, ಮಂಡ್ಯದಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿ ಮನೆಗಳಿಗೆ ನೀರು ನುಗ್ಗಿದೆ.

ಮುಸ್ಲಿಂಕೆರೆ, ಆಲಳ್ಳಿ ಕೆರೆ ಮಧ್ಯದ ರಾಜಕಾಲುವೆ ತುಂಬಿದ ಪರಿಣಾಮ ಡ್ರೈನೇಜ್ ಮೂಲಕ ನೀರು ಮನೆಗಳಿಗೆ ನುಗ್ಗಿವೆ. ಇದರಿಂದಾಗಿ ಹಲವು ಕಡೆ ಮನೆಗಳು ಮುಳಗಡೆಯಾಗಿವೆ. ಜಮೀನು, ಗದ್ದೆಗಳು ನೀರುಪಾಲಾಗಿವೆ.

ಭಾರೀ ಮಳೆಯಿಂದಾಗಿ ಇಡೀ ರಾತ್ರಿ ನಿದ್ದೆಯಿಲ್ಲದೆ ಜೀವ ಭಯದಲ್ಲಿ ಕಾಲ ಕಳೆದಿದ್ದಾರೆ. ವರುಣ ಸೃಷ್ಟಿಸಿದ ಅವಾಂತರಕ್ಕೆ ಜನರು ಕಣ್ಣೀರು ಹಾಕುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!