ಪ್ರಜಾಸ್ತ್ರ ಅಪರಾಧ ಸುದ್ದಿ
ಮೈಸೂರು: ಭಾನುವಾರ ಮಧ್ಯ ರಾತ್ರಿ ಇಬ್ಬರನ್ನ ಹತ್ಯೆ ಮಾಡಲಾಗಿದೆ. ನಗರದ ಎಲೆತೋಟದ ಹತ್ತಿರ ಡಬಲ್ ಮರ್ಡರ್ ಆಗಿದೆ. ಕಿರಣ ಹಾಗೂ ಕಿಶನ ಅನ್ನೋ ಇಬ್ಬರು ಯುವಕರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಕೊಲೆಯಾದವರು ಗೌರಿಶಂಕರ ನಗರದ ನಿವಾಸಿಗಳೆಂದು ಹೇಳಲಾಗ್ತಿದೆ. ಯಾರು ಕೊಲೆ ಮಾಡಿದ್ರು, ಯಾಕೆ ಮಾಡಿದ್ರು, ಹಂತಕರು ಹಾಗೂ ಇವರ ನಡುವೆ ಏನು ವ್ಯವಹಾರವಿತ್ತು ಅನ್ನೋದರ ತನಿಖೆ ನಡೆಯುತ್ತಿದೆ. ಕೆ.ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹತ್ಯೆ ನಡೆದಿದೆ.