ಬಿಜೆಪಿ ಸರ್ಕಾರ ಬಂದಾಗೆಲ್ಲ ಅವರೆ ಸಚಿವರಾಗಬೇಕು?: ರೇಣುಕಾಚಾರ್ಯ

192

ಪ್ರಜಾಸ್ತ್ರ ಸುದ್ದಿ

ದಾವಣಗೆರೆ: ರಾಜ್ಯದಲ್ಲಿ ಇದೀಗ ಸಚಿವ ಸಂಪುಟದ ಚರ್ಚೆ ಜೋರಾಗಿದೆ. 4 ಸ್ಥಾನಗಳು ಖಾಲಿ ಇವೆ. ಇದರ ಜೊತೆಗೆ ಪದೆಪದೆ ಸಚಿವರಾದವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಹೀಗಾಗಿ ಈಗ್ಲೇ ಸಚಿವ ಸಂಪುಟ ಪುನರ್ ರಚನೆಯಾಗಲಿ ಅನ್ನೋ ಕೂಗು ಜೋರಾಗಿದೆ. ಇದರ ನಡುವೆ ಶಾಸಕ ಎಂ.ಪಿ ರೇಣುಕಾಚಾರ್ಯ ಬಹಿರಂಗವಾಗಿಯೇ ತಮ್ಮದೆ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಬಿಜೆಪಿ ಸರ್ಕಾರ ಬಂದಾಗಲೆಲ್ಲ ಅವರೆ ಸಚಿವರಾಗಬೇಕೆ? ನಮಗೆ ಆ ಯೋಗ್ಯತೆ ಇಲ್ವಾ ಎಂದಿದ್ದಾರೆ. ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಬರುವಲ್ಲಿ ನನ್ನ, ಯತ್ನಾಳ ಪಾತ್ರ ಸಾಕಷ್ಟಿದೆ. ಹೀಗಿರುವಾಗ ನಮ್ಮನ್ನೇಕೆ ಸಚಿವ ಸಂಪುಟ ಸೇರಿಸಬಾರದು. ಅಗತ್ಯ ಬಿದ್ದರೆ ದೆಹಲಿಗೆ ಹೋಗುತ್ತೇವೆ ಎಂದು ಹೊನ್ನಳ್ಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!