ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸ ಮಂಡನೆಗೆ ಸಂಬಂಧಿಸಿದಂತೆ ಇಂದು ಪುರಸಭೆ ಕಾರ್ಯಾಲಯದಲ್ಲಿ ಸಭೆ ನಡೆಯಿತು. ಇಂದಿನ ಸಭೆಯಲ್ಲಿ ಡಾ.ಶಾಂತವೀರ ಮನಗೂಳಿ ಪರವಾಗಿ 8 ಜನ ಸದಸ್ಯರು ಹಾಜರಿದ್ದರು. ಅಲ್ದೇ, 15 ಜನ ಸದಸ್ಯರು ಗೈರಾಗಿದ್ದರು. ಹೀಗಾಗಿ ಅಧ್ಯಕ್ಷರಾಗಿ ಡಾ.ಶಾಂತವೀರ ಮನಗೂಳಿ, ಉಪಾಧ್ಯಕ್ಷರಾಗಿ ಹಾಸೀಂಪೀರ ಆಳಂದ ಮುಂದುವರೆದಿದ್ದಾರೆ.
ಸಭೆ ಮುಂದೂಡಲು ಮನವಿ
ಇನ್ನು ಅವಿಶ್ವಾಸ ಮಂಡನೆಗೆ ಸಂಬಂಧಿಸಿದಂತೆ ಸಂಸದರು, ಶಾಸಕರು, 23 ಸದಸ್ಯರು ಸೇರಿ 25 ಜನರಿಗೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ಅವಿಶ್ವಾಸ ನಿರ್ಣಯದ ಸಭೆ ನಡೆಸಲು ಪುರಸಭೆ ನಿಯಮಾವಳಿ ಪ್ರಕಾರ 9 ಸದಸ್ಯರು ಇರಬೇಕು. ಆದರೆ, ತಾವು 8 ಸದಸ್ಯರೊಂದಿಗೆ ಸಭೆ ನಡೆಸಿದ್ದು ನಿಮ್ಮೆ ನಡೆ ಕಾನೂನು ಬಾಹಿರವಾಗಿದ್ದು ಸಭೆ ಮುಂದೂಡಬೇಕೆಂದು ಪುರಸಭೆ ಮುಖ್ಯಾಧಿಕಾರಿಗೆ ಅವಿಶ್ವಾಸ ಮಂಡನೆ ಪರ ಇರುವವರು ಮನವಿ ಸಲ್ಲಿಸಿದ್ದಾರೆ.
ಮತ್ತೆ ಕಾನೂನು ಸಮರ?
ಅವಿಶ್ವಾಸ ಗೊತ್ತುವಳಿ ಮಂಡನೆ ಕದನ ಸಧ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಂಸದರು, ಶಾಸಕರು, ಬಿಜೆಪಿ ಸದಸ್ಯರು ಸಭೆಗೆ ಗೈರಾಗಿದ್ದರು. ಇದೀಗ ಸಭೆ ಮುಂದೂಡಲು ಸಹಿ ಮಾಡಿರುವ ಸದಸ್ಯರು ಸಹ ಇಂದಿನ ಸಭೆಯಿಂದ ದೂರ ಉಳಿದಿದ್ದರು. ಹೀಗಾಗಿ ಮತ್ತೆ ಕಾನೂನು ಸಮರ ಏನಾದರು ನಡೆಸುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ.