ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕೋವಿಡ್ 19ನಿಂದಾಗಿ ದೇಶದಲ್ಲಿ ನಡೆದ ಅನಾಹುತಗಳು, ಸರ್ಕಾರ ತೆಗೆದುಕೊಂಡು ಆರ್ಥಿಕತೆ ಕ್ರಮಗಳು, ಯೋಜನೆಗಳಿಗೆ ಸಂಬಂಧಿಸಿದಂತೆ ದಾಖಲೆ ಕೊಡಲು ಕೇಂದ್ರ ಸರ್ಕಾರ ಹಿಂದುಮುಂದು ನೋಡ್ತಿರುವುದಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್, ಎನ್ ಡಿಎ ಅಂದ್ರೆ ನೋ ಡೇಟಾ ಅವೈಲಬಲ್ ಎಂದು ಕಾಲೆಳೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ತರೂರ್, ನೇಮ್ ಚೇಂಜರ್ಸ್(ಹೆಸರು ಬದಲಾಯಿಸುವವರು) ಅನ್ನೋ ಕಾರ್ಟೂನ್ ಪೋಸ್ಟ್ ಮಾಡಿ ಈ ರೀತಿ ಬರೆದಿದ್ದಾರೆ. ಕೋವಿಡ್ ನಿಂದ ಸತ್ತವರ ಮಾಹಿತಿ ಇಲ್ಲ. ವಲಸೆ ಕಾರ್ಮಿಕರ ಬಗ್ಗೆ ಮಾಹಿತಿ ಇಲ್ಲ. ರೈತರ ಆತ್ಮಹತ್ಯೆ ಬಗ್ಗೆ ವರದಿ ಇಲ್ಲ. ಜಿಡಿಪಿ, ಆರ್ಥಿಕ ಉತ್ತೇಜನ ಸಂಬಂಧಿಸಿದ ಮಾಹಿತಿ ಇಲ್ಲ. ಯಾವುದೇ ಕೇಳಿದ್ರೂ ಅಸ್ಪಷ್ಟವಾಗಿದೆ. ಹೀಗಾಗಿ ಎನ್ ಡಿಎ ಅನ್ನೋದಕ್ಕೆ ಹೊಸ ಅರ್ಥವನ್ನ ನೀಡುತ್ತಿದೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.