ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರೈತರ ಸಾಕಷ್ಟು ವಿರೋಧ, ಪ್ರತಿಭಟನೆ ನಡೆವೆಯೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿಧೇಯಕ ಸೇರಿದಂತೆ ಒಟ್ಟು 12 ವಿಧೇಯಕಗಳು ಇಂದು ಮಂಡಿಸಲಾಗಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ, 2020ನೇ ಸಾಲಿನ ಕರ್ನಾಟಕ ಲೋಕಾಯುಕ್ತ ವಿಧೇಯಕ ಮಂಡಿಸಿದ್ರು. ಇದರ ಜೊತೆಗೆ ಪಟ್ಟಣ ಹಾಗೂ ಗ್ರಾಮಾಂತರ ಯೋಜನೆ ತಿದ್ದುಪಡಿಯನ್ನ ಮಂಡಿಸಿದ್ರು.
ಕಂದಾಯ ಸಚಿವ ಆರ್.ಅಶೋಕ, 2020ನೇ ಸಾಲಿನ ಭೂ ಸುಧಾರಣೆಗಳ ವಿಧೇಯಕ 1961ರ(ಅಧಿನಿಯಮ(10) 79ಎ, 79ಬಿ, 79ಸಿ ಬಿಡುವ ಪ್ರಸ್ತಾಪ ಮಾಡಲಾಗಿದೆ. ಎ ವರ್ಗದ ನೀರಾವರಿ ಭೂಮಿ ಕೃಷಿ ಉದ್ದೇಶಕ್ಕೆ ಮಾತ್ರ ಮಾರಾಟ ಮಾಡಬಹುದು ಎನ್ನಲಾಗಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, 2020ನೇ ಸಾಲಿನ ಕರ್ನಾಟಕ ಕೈಗಾರಿಕೆಗಳ ವಿಧೇಯಕವು, ವಾಣಿಜ್ಯ ಕಾರ್ಯಾಚರಣೆ ಆರಂಭಕ್ಕೆ ಮೊದಲು ಅಂತಿಮ ಅನುಮೋದನೆಗೆ ಪ್ರಸ್ತಾಪಿಸಲಾಯ್ತು. ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಆರೋಗ್ಯ ಸಚಿವ ಶ್ರೀರಾಮುಲು, ತೋಟಗಾರಿಕೆ ಸಚಿವ ಕೆ.ಸಿ ನಾರಾಯಣಗೌಡ, ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು ತಮ್ಮ ಸಚಿವಾಲಯದ ವ್ಯಾಪ್ತಿಯ ವಿಧೇಕಗಳನ್ನ ಮಂಡಿಸಿದ್ರು.