ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೆಲ ಸಂಘಟನೆಗಳು ಇತರೆ ಸಮುದಾಯಗಳ ಜೊತೆ ವ್ಯಾಪಾರಕ್ಕೆ ಒಪ್ಪುತ್ತಿಲ್ಲ. ಸಣ್ಣಪುಟ್ಟ ವ್ಯಾಪಾರಕ್ಕೆ ಯಾಕೆ ತೊಂದರೆ, ಇದರ ಬದಲು ಪ್ರಧಾನಿ ಮೋದಿ ಮುಸ್ಲಿಂ ರಾಷ್ಟ್ರಗಳೊಂದಿಗಿನ ವ್ಯಾಪಾರ ನಿಲ್ಲಿಸಲಿ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಸಿಎಂ ಬೊಮ್ಮಾಯಿಯವರು ಮೋದಿ ಬಜೆಟ್ ನಲ್ಲಿ ಚೆಂದ ಹೆಸರು ಕೊಟ್ಟಿದ್ದಾರೆ. ಸರ್ವಸ್ಪರ್ಶಿ ಸರ್ವವ್ಯಾಪಿ ಅಂತ. ಭ್ರಷ್ಟಾಚಾರದಲ್ಲಿ ಸರ್ವವ್ಯಾಪಿ ಆಗಿದ್ದಾರೆ. ಹಲಾಟ್ ಕಟ್, ಜಟ್ಕಾ ಕಟ್ ನಡೆಯುತ್ತಿದೆ. ಬಿಜೆಪಿ ನಾಯಕರು ಆರ್ಥಿಕ ಜಿಹಾದ್ ಮಾಡುತ್ತಿದ್ದಾರೆ. ಹಿರೋಯಿನ್ ಹುಟ್ಟು ಹಬ್ಬಕ್ಕೆ ಪ್ರಧಾನಿಗೆ ಟ್ವೀಟ್ ಮಾಡಕ್ಕೆ ಬರುತ್ತೆ. ಗುತ್ತಿಗೆದಾರ ಕೊಟ್ಟ ದೂರಿಗೆ ಪ್ರತಿಕ್ರಿಯಿಸುವುದಕ್ಕೆ ಸಮಯ ಇಲ್ಲವೆಂದು ವಾಗ್ದಾಳಿ ನಡೆಸಿದರು.