ಪ್ರಜಾಸ್ತ್ರ ಸುದ್ದಿ
ವಿಜಯಪುರ: ಈ ಬಾರಿ ಕೋವಿಡ್ 19 ಹಾವಳಿಯಿಂದ ಪಟಾಕಿ ಹಾರಿಸುವುದಕ್ಕೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆದಿದೆ. ಈ ನಡುವೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪಟಾಕಿ ನಿಷೇಧ ಮಾಡಿರುವುದಕ್ಕೆ ಕಿಡಿ ಕಾರಿದ್ದಾರೆ.
ಬಕ್ರೀದ್ ಹಬ್ಬದಲ್ಲಿ ರಕ್ತ ಹರಿಸುವುದು ಬೇಡ. ಹೊಸ ವರ್ಷದ ಸಂದರ್ಭದಲ್ಲಿ ಪಟಾಕಿ ಹಚ್ಚುವುದು ಬೇಡ. ಶುಕ್ರವಾರ ಸ್ಪೀಕರ್ ನಲ್ಲಿ ಆಜಾನ್ ಕೂಗುವುದು. ರಸ್ತೆಯಲ್ಲಿ ನಮಾಜ್ ಮಾಡುವುದು ಬೇಡ. ನಾವು ಮನೆಯಲ್ಲಿ ದೀಪ ಹಚ್ಚುತ್ತೇವೆ. ಅವರು ಮನೆಯಲ್ಲಿಯೇ ಸ್ಪೀಕರ್ ಇಲ್ಲದೆ ನಮಾಜು ಮಾಡಲಿ ಎಂದು ಶಾಸಕ ಯತ್ನಾಳ ಸವಾಲು ಹಾಕಿದ್ದಾರೆ.