ಪ್ರಜಾಸ್ತ್ರ ಸುದ್ದಿ
ನವದೆಹಲಿ: ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಆಗಾಗ ಟೀಕೆಗಳನ್ನು ಮಾಡುತ್ತಲೇ ಬರುತ್ತಿರುವ ಸ್ವಪಕ್ಷೀಯ ಸಂಸದ ಸುಬ್ರಮಣಿಯನ್ ಸ್ವಾಮಿ, ಇದೀಗ ಪ್ರಧಾನಿ ಮೋದಿಯನ್ನು ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ ಎಂದು ಶನಿವಾರ ಟ್ವೀಟ್ ಮಾಡಿದ್ದಾರೆ.
ಭಾರತ ಪ್ರತಿ ವರ್ಷ ಶೇಕಡ 10ರಷ್ಟು ಜಿಡಿಪಿ ಸಾಧಿಸುವ ಶಕ್ತಿ ಹೊಂದಿದೆ. 10 ವರ್ಷಗಳಲ್ಲಿ ನಿರುದ್ಯೋಗ ಕೊನೆಗಾಣಿಸುವ ಶಕ್ತಿ ಹೊಂದಿದೆ. ಇದರಿಂದ ಬಡತನ ನಿರ್ಮೂಲನೆ ಮಾಡಬಹುದು. ಆದರೆ, ಇದು ಹಣಕಾಸು ಇಲಾಖೆಗೆ ಗೊತ್ತೇ ಇಲ್ಲ. ಮೋದಿ ಸಹ ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥೆ ಎಂದಿದ್ದಾರೆ.