ಮಂಡ್ಯ: ಲೋಕಸಭಾ ಚುನಾವಣೆ ಟೈಂನಲ್ಲಿ ತಮಭಿಕ್ಷೆ ಬೇಡುವಾಗ ಕಾಂಗ್ರೆಸ್ ಕಚೇರಿ ನೆನಪಾಗ್ತಿತ್ತು. ಇದೀಗ ಬಿಜೆಪಿ ಕಚೇರಿ ನೆನಪಾಗ್ತಿದೆ ಅಂತಾ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ ದ್ಯಾವಪ್ಪ ಕಿಡಿ ಕಾರಿದ್ದಾರೆ.
ಸುಮಲತಾ ಬಗ್ಗೆ ಜನರು ತಿಳಿದುಕೊಳ್ಳಬೇಕಾಗಿದೆ. ಅಧಿಕಾರಕ್ಕಾಗಿ ಜನರು ಹೇಗೆ ಬದಲಾಗ್ತಾರೆ. ಜನ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಅವರನ್ನ ಗೆಲ್ಲಿಸಿರುವುದನ್ನ ಮರೆತು ಬಿಜೆಪಿ ಕಚೇರಿಗೆ ಹೋಗಿ ಕೃತಜ್ಞತೆ ಸಲ್ಲಿಸಿ ಬಂದಿದ್ದಾರೆ. ಅವರ ಬಗ್ಗೆ ಮಾತ್ನಾಡಲು ಸಹ ಅಸಹ್ಯವಾಗುತ್ತೆ ಅಂತಾ ಸಿ.ಎಂ ದ್ಯಾವಪ್ಪ ಹೇಳಿದ್ದಾರೆ.
ಬುಧವಾರ ಮಂಡ್ಯದಲ್ಲಿರುವ ಬಿಜೆಪಿ ಕಚೇರಿಗೆ ತೆರಳಿದ ಸಂಸದೆ ಸುಮಲತಾ ಅಂಬರೀಶ ಅವರು, ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದಗಳನ್ನ ಸಲ್ಲಿಸಿದ್ರು. ಈ ವೇಳೆ ಮಾತ್ನಾಡಿದ ಅವರು, ನನ್ಗೆ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ನೀಡಿದ್ರು. ನಾಯಕರು ನೀಡ್ಲಿಲ್ಲ ಅಂತಾ ಹೇಳಿದ್ರು.