ಪ್ರಜಾಸ್ತ್ರ ಸುದ್ದಿ
ರಾಯಪುರ: ಶಿಕ್ಷಕರ ಹುದ್ದೆಗೆ ಹೀಗೊಂದು ವಿಚಿತ್ರ ಅರ್ಜಿ ಬಂದಿದೆ. ಅದರ ತನಿಖೆಯನ್ನ ಪೊಲೀಸರು ಶುರು ಮಾಡಿದ್ದಾರೆ. ಛತ್ತೀಸಗಡದ ಶಿಕ್ಷಣ ಇಲಾಖೆ 14,850 ಶಿಕ್ಷಕರ ಹುದ್ದೆಗ ಅರ್ಜಿ ಆಹ್ವಾನಿಸಿದೆ. ಮಹೇಂದ್ರ ಸಿಂಗ್ ಧೋನಿ, ತಂದೆ ಹೆಸರು ಸಚಿನ್ ತಂಡೂಲ್ಕರ್ ಹೆಸರಿನ ಅರ್ಜಿಯೊಂದು ಬಂದಿದೆ.
ಹೀಗೆ ಬಂದ ವಿಚಿತ್ರ ಅರ್ಜಿಯನ್ನ ನೋಡಿದ ಅಧಿಕಾರಿಗಳು ಸಹ ಶಾಕ್ ಆಗಿದ್ದಾರೆ. ಇದರಿಂದ ಅಕ್ರಮದ ವಾಸನೆ ಬಂದಿದೆ. ಹೀಗಾಗಿ ಎಂ.ಎಸ್ ಧೋನಿ ಹೆಸರಿನ ವ್ಯಕ್ತಿ ಸೇರಿದಂತೆ 15 ಜನರಿಗೆ ಅಧಿಕಾರಿಗಳು ಸಂದರ್ಶನಕ್ಕೆ ಕರೆದಿದ್ದಾರೆ. ಆದ್ರೆ, ಎಂ.ಎಸ್ ಧೋನಿ ಹೆಸರಿನ ಅರ್ಜಿದಾರ ಸಂದರ್ಶನಕ್ಕೆ ಬಂದಿಲ್ಲ.
ದುರ್ಗನ್ ಸಿಎಸ್ ವಿಟಿಯು ವಿಶ್ವವಿದ್ಯಾಲಯದ ಎಂಜನಿಯರಿಂಗ್ ವಿದ್ಯಾರ್ಥಿಯ ಅರ್ಜಿ ಅದಾಗಿದ್ದು, ನಕಲಿ ಅರ್ಜಿಯ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಇದರ ತನಿಖೆಯನ್ನ ಪೊಲೀಸರು ನಡೆಸಿದ್ದಾರೆ.