ಪ್ರಜಾಸ್ತ್ರ ಅಪರಾಧ ಸುದ್ದಿ
ಹಾಸನ: ಕೊಲೆಗಾರರು ತಾವು ಮಾಡಿದ ಕೃತ್ಯದಿಂದ ಪಾರಾಗಲು ಪ್ಲಾನ್ ವೊಂದು ಮಾಡಿದ್ದಾರೆ. ಆದರೆ, ಅವರ ಪ್ಲಾನ್ ಉಲ್ಟಾ ಆಗಿ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದ ಘಟನೆ ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಾಡೇನಹಳ್ಳಿ ಡಾಭಾದಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಎಂಬಾತನನ್ನು ಮೂವರು ಕೊಲೆ ಮಾಡಿದ್ದಾರೆ. ನಂತರ ಶವವನ್ನು ರೈಲ್ವೆ ಹಳಿಯ ಮೇಲೆ ಹಾಕಲು ಪ್ಲಾನ್ ಮಾಡಿ ವಾಹನದಲ್ಲಿ ಬಂದಿದ್ದಾರೆ. ಹೀಗೆ ಬರುವಾಗ ಭರ್ಜರಿ ಎಣ್ಣೆ ಹೊಡೆದಿದ್ದಾರೆ. ಇದರ ಪರಿಣಾಮ 20 ಅಡಿ ಎತ್ತರದಿಂದ ರೈಲ್ವೆ ಟ್ರ್ಯಾಕ್ ಅವರ ವಾಹನವೇ ಬಿದ್ದಿದೆ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆಗ ಕೊಲೆ ಮಾಡಿ ಎಸ್ಕೇಪ್ ಆಗಲು ಮಾಡಿದ ಪ್ಲಾನ್ ಗೊತ್ತಾಗಿದೆ. ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಅನ್ನೋದರ ಕುರಿತು ತನಿಖೆ ನಡೆಸಲಾಗುತ್ತಿದೆ.