ಪ್ರಜಾಸ್ತ್ರ ಅಪರಾಧ ಸುದ್ದಿ
ಕಲಬುರಗಿ: ಮಾರಕಾಸ್ತ್ರಗಳಿಂದ ಯುವಕನೊಬ್ಬನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ತಾಲೂಕಿನ ಎಂ.ಎಂ ಗಾರ್ಡನ್ ಹತ್ತಿರ ಶುಕ್ರವಾರ ತಡರಾತ್ರಿ ನಡೆದಿದೆ. ಮಾಲಗತ್ತಿ ನಿವಾಸಿ ಬಸವರಾಜ್ ಅಂಬಲಗಿ(35) ಕೊಲೆಯಾದ ಯುವಕ.
ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಅನ್ನೋದು ತಿಳಿದು ಬಂದಿಲ್ಲ. ವಿಶ್ವವಿದ್ಯಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಕೊಲೆಗಾರರ ಹುಡುಕಾಟ ನಡೆದಿದೆ ಎಂದು ಸಿಪಿಐ ಅರುಣ್ ಮುರಗೊಂಡಿ ತಿಳಿಸಿದ್ದಾರೆ.