ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಡಿ ಬಾಸ್ ಸಧ್ಯ ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಡಿಜಿಟಲ್ ಮಾಧ್ಯಮಗಳಿಗೆ ಸಂದರ್ಶನ ನೀಡುವ ಮೂಲಕ ತಮ್ಮ ಚಿತ್ರದ ಪ್ರಚಾರ ನಡೆಸಿದ್ದಾರೆ. ಈ ವೇಳೆ ಅವರು ಆಡಿದ ಮಾತು ಈಗ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಹೌದು, ‘’ಅದೃಷ್ಟ ದೇವತೆ ಯಾವಾಗಲೋ ಒಂದು ಸಾರಿ ಡೋರ್ ತಟ್ಟುತ್ತಾಳಂತೆ. ಅವಳನ್ನು ಕರಕೊಂಡು ಹೋಗಿ ಬಟ್ಟೆ ಬಿಚ್ಚಿಸಿ ಸೀದಾ ಬೆಡ್ ರೂಮಿನಲ್ಲಿ ಕುಂದ್ರಿಸಬೇಕಂತೆ. ನೀವು ಬಟ್ಟೆ ಕೊಟ್ರೆ ತಾನೆ ಇನ್ನೊಂದು ಮನೆಗೆ ಹೋಗ್ತಾಳೆ.’’ ಎಂದು ಹೇಳಿರುವ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.