ಪ್ರಜಾಸ್ತ್ರ ಸುದ್ದಿ
ಸಿಂದಗಿ: ರಂಗ ದಿಗ್ಗಜ ಹಂದಿಗನೂರ ಸಿದ್ದರಾಮಪ್ಪ ಹಾಗೂ ಗಜಲ್ ಗಾಯಕ ರವಿ ಹಂದಿಗನೂರ ಅವರ ಸ್ಮರಾರ್ಥ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಗ್ರಾಮದಲ್ಲಿ ನಡೆಸಲಾಯಿತು.
ಜಯ ಕರ್ನಾಟಕ ಸಂಘಟನೆ ಹಾಗೂ ಹಂದಿಗನೂರ ಗ್ರಾಮ ಪಂಚಾಯ್ತಿ ವತಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿದ್ದು ಗಾಯನದಲ್ಲಿ ತೊಡಗಿಸಿಕೊಂಡವರು ತಮ್ಮ ಗಾಯನದ ಮೂಲಕ ಜನರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದ ಚಂದ್ರಕಾಂತ ಬೂದಿಹಾಳ, ಪತ್ರಕರ್ತ ವಿಜಯಕುಮಾರ ಪತ್ತಾರ, ರಾಂಪುರದ ಹೈದರ ಚಟ್ಟರಕಿ, ಮುರಡಿಯ ಮೌನೇಶ ಬಡಿಗೇರ ಅವರಿಗೆ ಸನ್ಮಾನಿಸಲಾಯಿತು.