ಮೈಸೂರು: ವಿಜಯದಶಮಿಯಂದು 750 ಕೆಜಿಯ ಅಂಬಾರಿ ಹೊರುವ ಅರ್ಜುನ ಇಂದು ತಾಲೀಮು ನಡೆಸಿದ. ಅರಮನೆಯ ಬಂಗಾರದ ಅಂಬಾರಿ ಹೋಲುವ 350 ಕೆಜಿ ತೂಕದ ಮರದ ಅಂಬಾರಿ ಹೊತ್ತು ನಗರದಲ್ಲಿ ತಾಲೀಮು ನಡೆಸಿದ.
ಡಿಎಸ್ಎಫ್ ಅಲೆಕ್ಸಾಂಡರ್, ಪಶು ವೈದ್ಯ ಡಾ. ನಾಗರಾಜ ಮಾರ್ಗದರ್ಶನದಲ್ಲಿ 350 ಕೆಜಿಯ ಮರದ ಅಂಬಾರಿ, 300 ಕೆಜಿ ತೂಕದ ಮರಳು ಮೂಟೆಯನ್ನ ಹೊತ್ತ ಅರ್ಜುನ, ನಗರದಲ್ಲಿ ಪ್ರದಕ್ಷಣೆ ಹಾಕಿದ. ದಸರಾ ಆಚರಣೆ ವೇಳೆ 1 ಸಾವಿರ ಕೆಜಿ ಭಾರ ಹೊರುವಷ್ಟರ ಮಟ್ಟಿಗೆ ರೆಡಿ ಮಾಡಲಾಗುತ್ತೆ.
ಮೊದ್ಲಿನಿಂದ ಅಂಬಾರಿ ಹೊತ್ತು ಸಾಗಿರುವ ಅರ್ಜುನನಿಗೆ ಇದು ಹೊಸದಾಗಿ ಏನೋ ಕಂಡಿಲ್ಲ. ಹೀಗಾಗಿ ಆರಾಮಾಗಿ 650 ಕೆಜಿ ಭಾರವನ್ನ ಹೊತ್ತು ಸಾಗಿದ. ಮುಂದಿನ ದಿನಗಳಲ್ಲಿ ಅರ್ಜುನನ ಅಕ್ಕ ಪಕ್ಕದಲ್ಲಿರುವ ಮೂರು ಆನೆಗಳಿಗೂ ತಾಲೀಮು ನಡೆಸಲಾಗುತ್ತೆ.