ಮಗಳ ಮದುವೆ ನಿಲ್ಲಿಸಲು ವರನ ತಂದೆಯನ್ನೇ ಕೊಲ್ಲಿಸಿದಳು

313

ಪ್ರಜಾಸ್ತ್ರ ಅಪರಾಧ ಸುದ್ದಿ

ಮೈಸೂರು: ಮಗಳ ಮದುವೆ ನಿಲ್ಲಿಸುವ ಸಲುವಾಗಿ ವರನ ತಂದೆಯನ್ನೇ ಕೊಲೆ ಮಾಡಿಸಿದ ಘಟನೆ ನಂಜನಗೂಡು ತಾಲೂಕಿನ ಹುಲ್ಲಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೌಡರಹುಂಡಿ ಗ್ರಾಮದ ಶಿವರಾಜಪ್ಪ ಕೊಲೆಯಾದ ದುರ್ದೈವಿ.

ಈ ಪ್ರಕರಣ ಸಂಬಂಧ ಶರತಕುಮಾರ, ಮದು ಹಾಗೂ ಕೊಲೆ ಮಾಡಿಸಿದ ಯುವತಿಯ ತಾಯಿ ಮಲ್ಲಿಗಮ್ಮನನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಶಿವರಾಜಪ್ಪನ ಮಗ ಪವನಕುಮಾರ ಹಾಗೂ ಕೊಲೆ ಮಾಡಿಸಿದ ಮಲ್ಲಿಗಮ್ಮನ ಮಗಳು ಪ್ರೀತಿಸ್ತಿದ್ರು. ಹೀಗಾಗಿ ನಿಶ್ಚಿತಾರ್ಥ ಸಹ ಮಾಡಲಾಗಿತ್ತು.

ಆದ್ರೆ, ಈ ಮದುವೆ ವಧುವಿನ ತಾಯಿ ಮಲ್ಲಿಗಮ್ಮಳಿಗೆ ಇಷ್ಟ ಇರ್ಲಿಲ್ಲ. ಕೊಲೆ ಮಾಡಿದ ಶರತಕುಮಾರ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಈಕೆ, ಹುಡುಗನ ತಂದೆಯನ್ನ ಕೊಲೆ ಮಾಡಲು ಒತ್ತಡ ಹಾಕಿದ್ಳಂತೆ. ಇದರ ಪರಿಣಾಮ ಶರತಕುಮಾರ ಮಧು ಎಂಬಾತನ ಸಹಾಯ ಪಡೆದು ಮೇ 28ರಂದು ಶಿವರಾಜಪ್ಪನನ್ನ ಕೊಂದು ನಾಲೆಗೆ ಎಸಿದ್ರು. ಜೂನ್ 2ರಂದು ಶವ ಪತ್ತೆಯಾಗಿತ್ತು.

ತಂದೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪವನಕುಮಾರ ದೂರು ದಾಖಲಿಸಿದ್ದ. ಇದರ ತನಿಖೆ ನಡೆಸಿದ ಪೊಲೀಸರು ಶರತಕುಮಾರನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಮಧು ಹಾಗೂ ಮಲ್ಲಿಗಮ್ಮಳನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!