ರಾಷ್ಟ್ರೀಯ ಮತದಾರರ ದಿನ ಆಚರಣೆ

396

ಸಿಂದಗಿ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಎದುರಿನ ಸ್ತ್ರೀಶಕ್ತಿ ಭವನದಲ್ಲಿ ತಾಲೂಕಾ ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಯ್ತು. ಮುಖ್ಯ ಅತಿಥಿಯಾಗಿ ಉಪ ತಹಶೀಲ್ದಾರ್ ಸಿ.ಬಿ ಬಾಬಾನಗರ ಆಗಮಿಸಿದ್ರು.

ಅಧ್ಯಕ್ಷತೆ ವಹಿಸಿದ್ದ ಶಿರಸ್ತೇದಾರ್ ಸುರೇಶ ಮ್ಯಾಗೇರಿ ಮಾತ್ನಾಡಿ, ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ ಆಗಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು. ರಾಷ್ಟ್ರಕ್ಕೆ ಪ್ರಜಾಪ್ರಭುತ್ವವೇ ಧರ್ಮ ಇದ್ದಂತೆ ಮತದಾರರೆ ದೇವರು ಅಂತಾ ಹೇಳಿದ್ರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಯುವ ಮತದಾರರಾದ ತ್ರೀವೆಣಿ ಶರ್ಮಾ, ಪೈಗಂಬರ ನಧಾಪ, ಕೃಷ್ಣಾ ನಗನೂರ, ಗಜಾನಂದ ಗಣಿಹಾರ, ನಜ್ಮಾ ಮಣೂರ, ಸೈನಾಜ ಬೆಕಿನಾಳ ವೋಟರ್ ಐಡಿ ಪಡೆದ್ರು. ಈ ವೇಳೆ ಕಂದಾಯ ನಿರೀಕ್ಷಕ ಐ ಎಂ ಮಕಾನದಾರ, ಗ್ರಾಮ ಲೆಕ್ಕಾಧಿಕಾರಿ ರಾಮಪ್ಪ ರಾಂಪೂರ ಹಾಜರಿದ್ರು. ಸಿ ಜಿ ಹೆಬ್ಬಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದ್ರು.




Leave a Reply

Your email address will not be published. Required fields are marked *

error: Content is protected !!