ಬ್ರೇಕಿಂಗ್ ನ್ಯೂಸ್:
ಸಿಂದಗಿ: ಪಟ್ಟಣದ ಬಾಲಕನೊಬ್ಬ ನೀರು ಪಾಲಾದ ಘಟನೆ ಬಂದಾಳ ಗ್ರಾಮದ ಕಾಲುವೆಯೊಂದರಲ್ಲಿ ನಡೆದಿದೆ. ಸುಮಾರು 12 ವರ್ಷದ ಬಾಲಕ ನೀರು ಪಾಲಾಗಿದ್ದಾನೆ. ಮೂರ್ನಾಲ್ಕು ಜನ ಸ್ನೇಹಿತರು ಸೇರಿಕೊಂಡು ಈಜಾಡಲು ಬಂದಾಗ ಈ ಘಟನೆ ನಡೆದಿದೆ.
12 ವರ್ಷದ ಗುಂಡು ತಳವಾರ ನೀರುಪಾಲಾದ ಬಾಲಕ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂದಿರುವ ಅಗ್ನಿಶಾಮಕ ಸಿಬ್ಬಂದಿ ಬಾಲಕನ ಹುಡುಕಾಟದಲ್ಲಿದ್ದಾರೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ಇನ್ನು ತಿಳಿಯಬೇಕಿದೆ.