ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶನಿವಾರ ರಾತ್ರಿ 10ರಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗ್ತಿದೆ. ಕೋವಿಡ್ 19 2ನೇ ಅಲೆ ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5ಗಂಟೆಯ, ಏಪ್ರಿಲ್ 10ರಿಂದ 20ರ ತನಕ 10 ದಿನ ನೈಟ್ ಕರ್ಫ್ಯೂ ಜಾರಿ ಮಾಡಲಾಗ್ತಿದೆ.
ಬೆಂಗಳೂರು, ಮೈಸೂರು. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ತುಮಕೂರು, ದಕ್ಷಿಣ ಕನ್ನಡ, ಬೀದರ, ಕಲಬುರಗಿ ಸೇರಿದಂತೆ 8 ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗ್ತಿದೆ. ಈ ವೇಳೆ ವಾಣಿಜ್ಯ ವಹಿವಾಟ, ಅನಗತ್ಯ ಓಡಾಟ ಹೊರತು ಪಡಿಸಿ ಉಳಿದಂತೆ ಸಹಜೀವನಕ್ಕೆ ತೊಂದರೆಯಿಲ್ಲ. ಅಗತ್ಯ ವಸ್ತುಗಳು ಪೂರೈಕೆ ಇರುತ್ತೆ.
ಇನ್ನು ಏಪ್ರಿಲ್ 11ರಂದು ಜ್ಯೋತಿಭಾ ಪುಲೆ ಅವರ ಜನುಮ ದಿನದಿಂದ ಹಿಡಿದು ಏಪ್ರಿಲ್ 14 ಅಂಬೇಡ್ಕರ್ ಅವರ ಜಯಂತಿ ತನಕ ವಾಕ್ಸಿನ್ಸನ್ ಡೇ ಎಂದು ಮಾಡಬೇಕು ಎಂದು ಪ್ರಧಾನಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.