ಅ.3ರ ಸಂಪುಟ ಸಭೆಯಲ್ಲಿ ನೂತನ ಜಿಲ್ಲೆ ಚರ್ಚೆ

349

ಬೆಂಗಳೂರು: ಸ್ವಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ನ ಕೆಲ ಶಾಸಕರ ವಿರೋಧದ ನಡುವೆಯೂ ಬಳ್ಳಾರಿಯನ್ನ ಎರಡು ವಿಭಾಗ ಮಾಡಿ ವಿಜಯನಗರ ನೂತನ ಜಿಲ್ಲೆ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಈ ಬಗ್ಗೆ ಅಕ್ಟೋಬರ್ 3ರಂದು ನಡೆಯುವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ಇದರ ಜೊತೆಗೆ ಬೆಳಗಾವಿಯ ಚಿಕ್ಕೋಡಿಯನ್ನ ಪ್ರತ್ಯೇಕಿಸಿ ಇದನ್ನ ಸಹ ನೂತನ ಜಿಲ್ಲೆ ಮಾಡಬೇಕು ಅನ್ನೋ ಬೇಡಿಕೆ ಬಗ್ಗೆಯೂ ಚರ್ಚೆ ನಡೆಯಲಿದೆ. ಇದರ ಜೊತೆಗೆ ಸಿಎಂ ಬಿ.ಎಸ್ ಯಡಿಯೂರಪ್ಪನವರ ರಾಜಕೀಯ ತವರು ಕ್ಷೇತ್ರ ಶಿಕಾರಿಪುರ ಜಿಲ್ಲೆ ರಚನೆ ಬಗ್ಗೆ ಚರ್ಚೆ ನಡೆಯಲಿದೆಯಂತೆ.

ಈ ಹಿಂದೆ ಸಹ ಸಿಎಂ ಬಿ.ಎಸ್ ಯಡಿಯೂರಪ್ಪನವರು ಶಿಕಾರಿಪುರವನ್ನ ಜಿಲ್ಲೆಯನ್ನಾಗಿ ಮಾಡಿ ಕ್ಷೇತ್ರದ ಜನತೆಗೆ ಹತ್ತಿರವಾಗಬೇಕು ಅನ್ನೋ ಪ್ಲಾನ್ ಮಾಡಿದ್ರು. ಅದು ಆಗಿರ್ಲಿಲ್ಲ. ಇದೀಗ ಆ ವಿಷ್ಯ ಮತ್ತೆ ಚರ್ಚೆಗೆ ಬಂದಿದೆ. ಶಿಕಾರಿಪುರಕ್ಕೂ ಜಿಲ್ಲಾ ಕೇಂದ್ರದ ಸ್ಥಾನಮಾನ ನೀಡುವ ಸಾಧ್ಯತೆಯಿದೆ ಅಂತಾ ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!