ಪ್ರಜಾಸ್ತ್ರ ಸುದ್ದಿ
ನವದೆಹಲಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದ್ರಿಂದಾಗಿ ಜನಸಾಮಾನ್ಯರು ಒದ್ದಾಟ ನಡೆಸಿದ್ದಾರೆ. ಇದರ ನಡುವೆ ಸೋಮವಾರದ ಬಜೆಟ್ ನಲ್ಲಿಯೂ ತೈಲ ಬೆಲೆ ಏರಿಕೆಯಾಗಿದೆ. ಇದನ್ನ ಸ್ವತಃ ಬಿಜೆಪಿ ಸಂಸದ ಸುಬ್ರಹ್ಮಣ್ಯಂ ಸ್ವಾಮಿ ಖಂಡಿಸಿದ್ದಾರೆ.
ಟ್ವೀಟರ್ ಮೂಲಕ ಪೆಟ್ರೋಲ್ ದರದ ಬಗ್ಗೆ ಕಿಡಿ ಕಾರಿದ್ದಾರೆ. ಸೀತೆಯ ನೆಲ ನೇಪಾಳದಲ್ಲಿ 53, ರಾವಣನ ನೆಲ ಶ್ರೀಲಂಕಾದಲ್ಲಿ 51 ರೂಪಾಯಿ ಇದ್ದರೆ, ರಾಮನ ನೆಲದಲ್ಲಿ 93 ರೂಪಾಯಿ ಆಗಿದೆ ಎಂದು ಕಿಡಿ ಕಾರಿದ್ದಾರೆ.