ಪ್ರಜಾಸ್ತ್ರ ಸುದ್ದಿ
ನವದೆಹಲಿ: ಮೊರ್ಬಿ ಜಿಲ್ಲೆಯಲ್ಲಿ ಐತಿಹಾಸಿಕ ಸೇತುವೆ ಕುಸಿದು ಬಿದ್ದು 134 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 50 ಮಕ್ಕಳಿವೆ. ನಿಜಕ್ಕೂ ಇದೊಂದು ರಾಷ್ಟ್ರೀಯ ದುರಂತ. ಇಂದು ಪ್ರಧಾನಿ ಮೋದಿ ಮೊರ್ಬಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ದುರಸ್ಥಿ ಕೆಲಸ ನಡೆಯುತ್ತಿದೆ.
ಆಸ್ಪತ್ರೆಯಲ್ಲಿ ಎಲ್ಲೆಡೆ ಸ್ವಚ್ಛತೆ, ಟೈಲ್ಸ್ ಕೆಲಸ, ಬಣ್ಣದ ಕೆಲಸ ಸೇರಿದಂತೆ ಸಕಲ ಸಿದ್ಧತೆ ಮಾಡಲಾಗುತ್ತಿದೆ. ಈ ಸಂಸ್ಕೃತಿ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಜನರ ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆಗಳು ಯಾವಾಗಲೂ ಸ್ವಚ್ಛತೆಯಿಂದ ಇರಬೇಕು. ಸುಸಜ್ಜಿತವಾಗಿರಬೇಕು. ಆದರೆ, ವಿವಿಐಪಿ ಸಂಸ್ಕೃತಿ ಕೊನೆಯಾಗುವುದು ಎಂದು ಕಿಡಿ ಕಾರಲಾಗುತ್ತಿದೆ.