ಕನ್ನಡ ಸಾಹಿತ್ಯದಲ್ಲಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರದ್ದು ವಿಶೇಷ ಹೆಸರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳು. ಭಾಷಾ ನಿಘಂಟು ಕ್ಷೇತ್ರ, ಸಂಸ್ಕೃತಿ ಅಧ್ಯಯನ, ಸಂಪಾದನೆ, ಜೀವನ ಚರಿತ್ರೆ, ಅನುವಾದ ಕ್ಷೇತ್ರಗಳಲ್ಲಿಯೂ ಕೈಯಾಡಿಸಿ ಖ್ಯಾತಿ ಪಡೆದವರು.
ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ತಮ್ಮ ಬರಹವನ್ನ ಬೇರೆ ಬೇರೆ ಆಯಾಮಗಳ ಮೂಲಕ ಓದುಗರಿಗೆ ನೀಡುತ್ತಿರುವವರು ಶಾಸ್ತ್ರಚೂಡಾಮಣಿ ಎಂದೇ ಪ್ರಸಿದ್ಧಿಯನ್ನ ಪಡೆದವರು ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಅವರು. ಪ್ರಜಾಸ್ತ್ರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶುಭ ಕೋರಿದ್ದಾರೆ.