ನ್ಯಾಯಾಂಗಕ್ಕೆ ಮುಳ್ಳುಹಂದಿ ಬೇಟೆಗಾರ

668

ಸಿಂದಗಿ: ತಾಲೂಕಿನ ಬ್ರಹ್ಮ ದೇವನಮಡು ಗ್ರಾಮದಲ್ಲಿ ಮುಳ್ಳು ಹಂದಿಯನ್ನ ಬೇಟೆಯಾಡಿ ಅದರ ವಿಡಿಯೋವನ್ನ ಟಿಕ್ ಟಾಕ್ ನಲ್ಲಿ ಷೇರ್ ಮಾಡಿದ್ದ ಯುವಕನ್ನ ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಆಧರಿಸಿ, ವನ್ಯಜೀವಿ ಕಾಯ್ದೆಯಡಿ ಅರಣ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಅರಣ್ಯಾಧಿಕಾರಿ ಅಶೋಕ ಪಾಟೀಲ ಅವರ ಮಾರ್ಗ ದರ್ಶನದಲ್ಲಿ ಹಾಗು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ. ಪಿ ಚವಾಣ ಅವರ ನೇತೃತ್ವದ ತಂಡ, ಜೇವರಗಿ ತಾಲೂಕಿನ ಮಂಜುನಾಥ ಬಡಿಗೇರ ಎಂಬತನನ್ನ ಬಂಧಿಸಿ ವಿಜಯಪುರ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಈ ಕೃತ್ಯದಲ್ಲಿ ಭಾಗಿಯಾದ ಉಳಿದ ಆರೋಪಿಗಳ ಶೋಧ ಕಾರ್ಯಾ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ಬಿ ಐ ಬಿರಾದಾರ, ಉಪ ವಲಯ ಅರಣ್ಯ ಅಧಿಕಾರಿ ಎಸ್. ಎಸ್. ಬಿರಾದಾರ, ಎಂ ಎನ್. ಮುಲ್ಲಾ, ಗೌಡಪ್ಪ ಸೋನಕನಹಳ್ಳಿ, ರಾಮಗಿರಿ ಮಠ, ವಿ. ಚಿನ್ನೂರ ತಂಡ ಪಾಲ್ಗೊಂಡಿತ್ತು.




Leave a Reply

Your email address will not be published. Required fields are marked *

error: Content is protected !!