ಮೈತ್ರಿ ಮುಂದುವರೆಯುತ್ತೆ: ದೇಶಪಾಂಡೆ

443

ಹುಬ್ಬಳ್ಳಿ: ಲೋಕಸಭಾ ಫಲಿತಾಂಶ ಆಘಾತ ತಂದಿದೆ ಅಂತಾ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮತದಾರರೇ ದೇವರು. ಅವರ ತೀರ್ಪಿಗೆ ತಲೆ ಬಾಗುತ್ತೇವೆ. ಈ ಫಲಿತಾಂಶ ರಾಜ್ಯಕ್ಕೆ ಪರಿಣಾಮ ಬಿರುವುದಿಲ್ಲ ಅಂತಾ ಹೇಳಿದರು.

ಚುನಾವಣೆ ಕ್ರಿಕೆಟ್ ಮ್ಯಾಚ್ ಇದ್ದ ಹಾಗೆ. ಸೋಲು ಗೆಲುವು ಸಾಮಾನ್ಯ. ಇದರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಮೈತ್ರಿ ಸರ್ಕಾರ ಮುಂದುವರೆಯುತ್ತೆ. ಕುಮಾರಸ್ವಾಮಿ ಅವರು ಸಿಎಂ ಆಗಿ ಮುಂದುವರೆಯುವುದು ನೆಮ್ಮಲ್ಲರ ನಿರ್ಧಾರವಾಗಿದೆ ಅಂತಾ ಹೇಳಿದ್ರು. ಇದೇ ವೇಳೆ ರಮೇಶ ಜಾರಕಿಹೊಳಿ ಬಗ್ಗೆ ಮಾತನಾಡಿದ ಅವರು, ಅವರು ನನ್ನ ಸಂಪರ್ಕದಲ್ಲಿ ಇಲ್ಲ ಎಂದರು.

ಸಿದ್ದರಾಮಯ್ಯನವರು ಚುನಾವಣೆಗೆ ಸ್ಪರ್ಧಿಸಲ್ಲ. ಸಿಎಂ ಅಂತಾ ಪದೆಪದೆ ಹೇಳಿ ಗೊಂದಲ ಸೃಷ್ಟಿಸಬೇಡಿ. ಅದು ಅಪ್ರಸ್ತುತ ಎಂದರು. ಇನ್ನು ರಾಹುಲ್ ಗಾಂಧಿ ರಾಜೀನಾಮೆ ನಿರ್ಧಾರ ಸರಿಯಲ್ಲ. ಎಲ್ಲರೂ ಸೇರಿ ಚುನಾವಣೆ ಎದುರಿಸಿದ್ದೇವೆ. ಪ್ರತಿಪಕ್ಷದವರು ರಾಜೀನಾಮೆ ಕೊಡಿ ಅಂತಾ ಕೇಳೋದು ಸಾಮಾನ್ಯ. ಆದ್ರೆ, ಈಡೇರಬೇಕಲ್ಲ ಅಂತಾ ಕೇಳಿದ್ರು.




Leave a Reply

Your email address will not be published. Required fields are marked *

error: Content is protected !!