ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಭರ್ಜರಿ ಮಳೆಯಾಗ್ತಿದೆ. ಬಿರುಗಾಳಿ ಸಹಿತ ಭರ್ಜರಿ ಮಳೆಯಾಗ್ತಿದ್ದು, ಬೀದ ಬದಿ ಡಬ್ಬಾ ಅಂಗಡಿಗಳೆಲ್ಲ ಹಾರಿ ಹೋಗ್ತಿವೆ. ಪಟ್ಟಣದ ನ್ಯಾಯಾಲಯದ ಎದುರಿಗೆ ಇರುವ ಖಾಲಿ ಡಬ್ಬಾ ಅಂಗಡಿಗಳ ಗಾಳಿಗೆ ಹಾರಿ ಹೋಗಿವೆ. ಇವುಗಳನ್ನ ಪುರಸಭೆ ವತಿಯಿಂದ ನಿರ್ಮಿಸಲಾಗಿತ್ತು.
ಇನ್ನು ಸಿಡಲು ಬಡೆದು ಆಕಳೊಂದು ಸಾವನ್ನಪ್ಪಿದೆ. ನಾಗಪ್ಪ ಸಂಗಮ ಎಂಬುವರಿಗೆ ಸೇರಿದ ಆಕಳು ಸಾವನ್ನಪ್ಪಿದೆ. ಜಮೀನಿನಲ್ಲಿ ಆಕಳನ್ನ ಮರಕ್ಕೆ ಕಟ್ಟಿದ ಹಾಕಿದ ವೇಳೆ ಅವಘಡ ನಡೆದಿದೆ. ಈ ಘಟನೆ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.