ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದಲ್ಲಿ ಇಂದು ಸಂಜೆ ಭರ್ಜರಿಯಾಗಿ ಮಳೆಯಾಗಿದೆ. ಸುಂಜೆ ಸುಮಾರು 6 ಗಂಟೆಯ ನಂತರ ಶುರುವಾದ ಮಳೆ ಸುಮಾರು 2 ಗಂಟೆಗಳ ಕಾಲ ಸುರಿದಿದೆ. ಇದ್ರಿಂದಾಗಿ ಬಿಸಿಲಿನಿಂದ ಬಳಲುತ್ತಿದ್ದ ಜನರಿಗೆ ವರುಣದೇವ ತಂಪೆರದಿದ್ದಾನೆ.
ಸಂಜೆ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ಹರಿದಿದೆ. ಚರಂಡಿಗಳು ತುಂಬಿ ರಸ್ತೆ ಮೇಲೆಲ್ಲ ನೀರು ಹರಿದು ಸಾರ್ವಜಿಕರು, ವಾಹನ ಸವಾರರು ಸಂಚಾರಕ್ಕೆ ಕೆಲವು ಕಡೆ ಸಮಸ್ಯೆಯಾಗಿದೆ. ಕೆಲ ಏರಿಯಾಗಳಲ್ಲಿ ಮನೆಗಳಿಗೆ ನೀರು ನುಗ್ಗಿರುವುದು ತಿಳಿದು ಬಂದಿದೆ. ಒಟ್ಟಿನಲ್ಲಿ ಮಳೆರಾಯ ಜನರಿಗೆ ಖುಷಿ ನೀಡಿದ್ದಾನೆ.