ಪ್ರಜಾಸ್ತ್ರ ಸುದ್ದಿ
ಸಿರಿವಾರ: ಮನುಷ್ಯನಲ್ಲಿ ಅನುಮಾನ ಬಂದ್ರೆ ಏನೆಲ್ಲ ಅನಾಹುತವಾಗುತ್ತೆ, ಸಣ್ಣ ವಿಷ್ಯ ಸಹ ಎಷ್ಟೊಂದು ದೊಡ್ಡ ಗುಡ್ಡವಾಗುತ್ತೆ ಅನ್ನೋದಕ್ಕೆ ರಾಯಚೂರು ಜಿಲ್ಲೆಯಲ್ಲಿ ಒಂದು ಘಟನೆ ನಡೆದಿದೆ. ಈ ಸ್ಟೋರಿ ಓದಿದ್ಮೇಲೆ ನಿಮ್ಗೆ ಅನಿಸುತ್ತೆ, ಜನ ಹೀಗೂ ಇರ್ತಾರಾ ಎಂದು..
ಸಿರಿವಾರ ತಾಲೂಕಿನ ಶಾಖಾಪುರ ಗ್ರಾಮದ ಕೆರೆಗೆ, ಕಳೆದ ಶುಕ್ರವಾರ ಅತ್ತನೂರ ಗ್ರಾಮದ ಅನ್ಯಕೋಮಿನ ವ್ಯಕ್ತಿಯೊಬ್ಬ ಕೆರೆಗೆ ಕಲ್ಲು ಎಸೆದಿದ್ದಾನೆ. ಇದನ್ನ ನೋಡಿದ ಕೆಲವರು, ಕೆರೆಗೆ ವಿಷ ಹಾಕಿದ್ದಾಣೆ. ಮಾಟ ಮಂತ್ರ ಮಾಡಿಸಿದ್ದಾನೆ ಅನ್ನೋ ಸುದ್ದಿ ಹಬ್ಬಿಸಿದ್ರು. ಇದರ ಪರಿಣಾಮ ಜನರು ಮನೆಯಲ್ಲಿರುವ ನೀರು ಚಲ್ಲಿದ್ರು. ಮಾಡಿದ ಅಡುಗೆ ಚಲ್ಲಿದ್ರು. ಕೊನೆಗೆ ಕೆರೆ ನೀರನ್ನೇ ಖಾಲಿ ಮಾಡಲು ಶುರು ಮಾಡಿದ್ರು.
ಕೆರೆ ನೀರು ಖಾಲಿ ಮಾಡ್ತಿರುವ ವಿಷ್ಯ ಗಂಭೀರ ಸ್ವರೂಪ ಪಡೆಯಿತು. ತಹಶೀಲ್ದಾರ್, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕಲ್ಲು ಎಸೆದ ವ್ಯಕ್ತಿಯನ್ನ ವಿಚಾರಿಸಿದ್ದಾರೆ. ಅವನು ತಮಾಷೆಗಾಗಿ ಕಲ್ಲು ಎಸೆದಿದ್ದು, ನಾನು ಯಾವುದೇ ವಿಷ ಹಾಕಿಲ್ಲ. ಮಾಟ ಮಂತ್ರಾನೂ ಇಲ್ಲ ಎಂದು ಹೇಳಿ, ಕೆರೆಯ ನೀರನ್ನ ಕುಡಿದ್ದಾನೆ. ಆದ್ರೂ ಜನರ ಅನುಮಾನ ಮಾತ್ರ ಹೋಗಿಲ್ಲ.
ಖಾಲಿ ಮಾಡ್ತಿದ್ದ ಕೆರೆಯನ್ನ ತಹಶೀಲ್ದಾರ್ ನಿಲ್ಲಿಸಿದ್ದಾರೆ. ಸುಖಾಸುಮ್ಮನೆ ಕೆರೆ ಖಾಲಿ ಮಾಡಲು ಬರುವುದಿಲ್ಲ. ತುಂಗಭದ್ರ ಎಡೆದಂಡೆ ಕಾಲುವೆಯಿಂದ ಕೆರೆಗೆ ನೀರು ತುಂಬಿಸಲಾಗ್ತಿದೆ. ನೀರಿನ ಪರೀಕ್ಷೆ ಮಾಡಿಸಲಾಗುತ್ತೆ. ನೀರಿನ ವರದಿ ಬಂದ್ಮೇಲೆ ಮುಂದಿನ ಕೆಲಸ ಎಂದಿದ್ದಾರೆ. ಹೀಗಾಗಿ ನೀರಿನ ಪರೀಕ್ಷೆ ವರದಿಗಾಗಿ ಕಾಯಲಾಗ್ತಿದೆ. ಅನುಮಾನ ಅನ್ನೋದು ಹೊಕ್ಕರೆ ಏನೆಲ್ಲ ಅನಾಹುತವಾಗುತ್ತೆ ಅನ್ನೋದಕ್ಕೆ ಸಾಕ್ಷಿಯಿದು.