ಸೂಪರ್ ಸ್ಟಾರ್ ರಜನಿಕಾಂತ ದ್ರಾವಿಡ ಚಳುವಳಿಯ ಪಿತಾಮಹ ಪೆರಿಯಾರ್ ಅವರ ಕುರಿತು ನೀಡಿದ ಹೇಳಿಕೆ ಸಂಬಂಧ, ಅವರ ಮನೆ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಅಲ್ದೇ ಬೇಷರತ್ ಕ್ಷಮೆ ಕೇಳಬೇಕೆಂದು ದ್ರಾವಿಡರ್ ವಿದುತಲೈ ಕಳಗಂ ಸಂಘಟನೆ ಆಗ್ರಹಿಸಿದೆ.
ಈ ಬಗ್ಗೆ ಮಾತ್ನಾಡಿರುವ ನಟ ರಜನಿಕಾಂತ, ಯಾವುದೇ ಒತ್ತಡಕ್ಕೆ ಮಣಿದು ನಾನು ಕ್ಷಮೆ ಕೇಳುವುದಿಲ್ಲ. ಅಂದು ನಾನು ಏನು ನೋಡಿದ್ದೇನೋ ಅದನ್ನು ಹೇಳಿದ್ದೇನೆ ಅಂತಾ ಪುನರ್ ಉಚ್ಛರಿಸಿದ್ದಾರೆ. 1971ರಲ್ಲಿ ಮೌಢ್ಯತೆ ಹೋಗಲಾಡಿಸಲು, ಪರಿಯಾರ್ ಅವರು ಸಾಕಷ್ಟು ಹೋರಾಟ ಮಾಡಿದ್ರು. ಅಂದು ಮೆರವಣಿಗೆಯಲ್ಲಿ ಶ್ರೀರಾಮ ಹಾಗೂ ಸೀತಾಮಾತೆಯ ಬೆತ್ತಲೆ ಫೋಟೋಗಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ರು. ಈ ಬಗ್ಗೆ ಯಾವುದೇ ಮಾಧ್ಯಮ ಸುದ್ದಿ ಮಾಡ್ಲಿಲ್ಲ ಎಂದು ರಜನಿ ಹೇಳಿದ್ದು ವಿವಾದ ಸೃಷ್ಟಿಸಿದೆ.