ಬಿಜೆಪಿಯ ಮೊದಲ ವಿಕೆಟ್ ಪತನ

387

ಬೆಳಗಾವಿ: ಇತ್ತ ಅನರ್ಹ ಶಾಸಕರು ಬಿಜೆಪಿ ಸೇರಿದ್ರೆ ಅತ್ತ ಬಿಜೆಪಿಯ ಮೊದಲ ವಿಕೆಟ್ ಕೈ ಹಿಡಿದಿದೆ. ಕುಂದಾನಗರಿಯ ಕಾಗವಾಡ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಕಾಗೆ ಕಣಕ್ಕೆ ಇಳಿಯುತ್ತಿದ್ದಾರೆ. ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿಕೊಂಡ್ರು.

ಕಾಗವಾಡ ಕ್ಷೇತ್ರದ ಟಿಕೆಟ್ ಸಿಗೋದು ಡೌಟ್ ಅನ್ನೋದು ಗೊತ್ತಾದ್ಮೇಲೆ 4 ಬಾರಿ ಶಾಸಕರಾದ ಪ್ರಭಾವಿ ನಾಯಕ ರಾಜು ಕಾಗೆ ಕಾಂಗ್ರೆಸ್ ಗೆ ಸೇರ್ಪಡೆಯಾದ್ರು. ಮೊದ್ಲೇ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿ ಕಾಂಗ್ರೆಸ್ ಸೇರುವ ಕುರಿತು ಮಾತ್ನಾಡಿದ್ದ ರಾಜು ಕಾಗೆ, ಕೈ ನಾಯಕರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರಾಗಿ ಸೇರ್ಪಡೆಯಾದ್ರು.

ಕಾಂಗ್ರೆಸ್ ನಿಂದ ಗೆದ್ದು ಶಾಸಕರಾಗಿದ್ದ ಶ್ರೀಮಂತ ಪಾಟೀಲ, ಅನರ್ಹಗೊಂಡು ಬಿಜೆಪಿಯಿಂದ ಸ್ಪರ್ಧೆಗೆ ಇಳಿಯುತ್ತಿದ್ರೆ, ಬಿಜೆಪಿ ಶಾಸಕರಾಗಿದ್ದ ರಾಜು ಕಾಗೆ ಕಾಂಗ್ರೆಸ್ ಸೇರಿಕೊಂಡು ಕೈ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ನಾಯಕರು ಅವರೇ ಪಕ್ಷ ಬದಲಾಗಿದೆ.




Leave a Reply

Your email address will not be published. Required fields are marked *

error: Content is protected !!