ನಿರ್ದೇಶಕ ರಾಮ ಗೋಪಾಲ ವರ್ಮಾ ಸಿನ್ಮಾಗಳಂದ್ರೆ ಅಲ್ಲೊಂದು ಏನೋ ವಿಶೇಷತೆ ಇರುತ್ತೆ. ಸದಾ ನೈಜ ಘಟನೆಗಳು, ವಿವಾದಾತ್ಮಕ ವಿಷಯಗಳನ್ನ ಕೇಂದ್ರವಾಗಿಟ್ಟುಕೊಂಡು ಸಿನ್ಮಾ ಮಾಡುವುದು ಆರ್ ಜಿವಿ ಕಯಾಲೆ. ಹೀಗಾಗಿ ಇವರಿಗೆ ವಿವಾದ ಹೊಸತಲ್ಲ.
ಲಕ್ಷ್ಮೀಸ್ ಎನ್ ಟಿ ಆರ್ ಚಿತ್ರದ ಮೂಲಕ ಚಂದ್ರಬಾಬು ನಾಯ್ಡು ಅವರನ್ನ ಕಾಡಿದ್ದ ನಿರ್ದೇಶಕ ಮತ್ತೆ ಅವರನ್ನೇ ಟಾರ್ಗೆಟ್ ಮಾಡಿದಂತೆ ಕಾಣ್ತಿದೆ. ಇದರ ಜೊತೆಗೆ ಸಿಎಂ ಜಗಮೋಹನ ರೆಡ್ಡಿ, ಪವನ ಕಲ್ಯಾಣ ಅವರ ರಾಜಕೀಯ ಒಳಮರ್ಮ ಹೇಳಲು ಹೊರಟಿದ್ದಾರೆ. ಅದಕ್ಕೆ ‘ಕಮ್ಮ ರಾಜ್ಯಂಲ್ಲೊ ಕಡಪ ರೆಡ್ಡಿಲು’ ಅನ್ನೋ ಟೈಟಲ್ ಇಟ್ಟಿದ್ದಾರೆ.
ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹಾಲಿ ಸಿಎಂ ಜಗಮೋಹನ ರಡ್ಡಿ ನಡುವಿನ ರಾಜಕೀಯ ಕಾದಾಟ ತೋರಿಸಲು ರೆಡಿಯಾಗಿದ್ದು ಟ್ರೇಲರ್ ಒಂದು ಸಾಂಪೆಲ್ ಆಗಿದೆ. ಇದರ ಜೊತೆಗೆ ನಟ, ರಾಜಕಾರಣಿ ಪವನ ಕಲ್ಯಾಣ ಅವರ ರಾಜಕೀಯದ ಸುತ್ತವೂ ಕಥೆಯಿದೆ. ಈಗಾಗ್ಲೇ ಟ್ರೇಲರ್ ರಿಲೀಸ್ ಆಗಿದ್ದು, ಸಿನ್ಮಾ ಯಾವಾಗ ರಿಲೀಸ್ ಆಗುತ್ತೆ ಅಂತಾ ಆಂಧ್ರದ ಜನ ಕಾಯುತ್ತಿದ್ದಾರೆ.