ಹೈದ್ರಾಬಾದ್: ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತೆಲಂಗಾಣ ವಕೀಲರ ಸಂಘ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ನಾಲ್ವರು ಆರೋಪಿಗಳ ಪರವಾಗಿ ವಕೀಲರು ವಾದ ಮಾಡದಿರಲು ನಿರ್ಧರಿಸಿದ್ದಾರೆ.
ಜೊಲ್ಲು ಶಿವ, ಜೊಲ್ಲು ನವೀನ, ಚಿಂತಾಕುಂಟ ಚೆನ್ನಕೇಶವುಲು ಹಾಗೂ ಮೊಹಮ್ಮದ ಅರೀದ ಅನ್ನೋ ನಾಲ್ವರನ್ನ ಬಂಧಿಸಲಾಗಿದೆ. ಇವರಿಗೆ ಕಾನೂನು ಬೆಂಬಲ ನೀಡಲ್ಲವೆಂದು ಬಾರ್ ಅಸೋಸಿಯೇಷನ್ ನಿರ್ಧಾರ ಮಾಡಿದೆ. ಈ ನಾಲ್ವರು ಪಾಪಿಗಳು ವೈದ್ಯೆ ಮೇಲೆ ಅತ್ಯಾಚಾರವೆಸಗಿ ಭೀಕರವಾಗಿ ಸುಟ್ಟು ಹಾಕಿದ್ರು. ಇದಕ್ಕೆ ದೇಶ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.