ಹತ್ಯಾಚಾರದ ಪಾಪಿಯನ್ನು ತುಂಡು ತುಂಡಾಗಿ ಕತ್ತಿರಸಬೇಕು: ಜಮೀರ್

194

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಜಿಲ್ಲೆಯ ಮಳವಳ್ಳಿಯಲ್ಲಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಪಾಪಿಯನ್ನು ತುಂಡು ತುಂಡಾಗಿ ಕತ್ತಿರಸಬೇಕು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತ ಬಾಲಕಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು. ಜೊತೆಗೆ 5 ಲಕ್ಷ ರೂಪಾಯಿ ನೆರವು ನೀಡಿದರು. ಈ ವೇಳೆ ಮಾತನಾಡಿದ ಅವರು, ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಅತ್ಯಂತ ಅಮಾನುಷ ಕೃತ್ಯ. ಮನುಷ್ಯರು ಯಾರೂ ಇಂತಹ ಕೆಲಸ ಮಾಡಲ್ಲ. ಇಂತಹ ಪ್ರಕರಣಗಳು ಪ್ರತ್ಯೇಕ ಕಾನೂನು ತರಬೇಕು. ಈ ಕೃತ್ಯದ ಪಾಪಿಯನ್ನು ತುಂಡು ತುಂಡಾಗಿ ಕತ್ತರಿಸಬೇಕು ಎಂದರು.




Leave a Reply

Your email address will not be published. Required fields are marked *

error: Content is protected !!