ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ನಡೆದ ಇಡಿ ದಾಳಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತ್ನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ಕಾಂಗ್ರೆಸ್ಸಿಗೊಂದು ನ್ಯಾಯ, ಬಿಜೆಪಿಗೊಂದು ನ್ಯಾಯ ಯಾಕೆ ಎಂದು ಕೇಳಿದರು.
ಇಡಿ ದಾಳಿಯಿಂದ ಜಮೀರಗೆ ಕಿರುಕುಳವಾಗುತ್ತೆ. ಅದನ್ನ ಅವರು ಸಮರ್ಥವಾಗಿ ಎದುರಿಸುತ್ತಾರೆ ಎಂದು ಹೇಳಿದ್ದಾರೆ. ಒಂದು ವರ್ಗವನ್ನ ಟಾರ್ಗೆಟ್ ಮಾಡುತ್ತಿರುವ ಬಿಜೆಪಿಯವರು ಬಹಳ ಪವಿತ್ರಾರಾ ಎಂದು ಕಿಡಿ ಕಾರಿದರು.