ಪ್ರಜಾಸ್ತ್ರ ಸುದ್ದಿ
ಕೇರಳ: ಪಕ್ಷದ ಮಹಿಳಾ ಕಾರ್ಯಕರ್ತೆಯೊಬ್ಬರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಪಿಎಂ ಕಾರ್ಯಕರ್ತರನ್ನ ಸೋಮವಾರ ಬಂಧಿಸಲಾಗಿದೆ. ಪುಲ್ಲುಲ್ಲಪರಂಬತ್ ಬಾಬುರಾಜ್ ಹಾಗೂ ಟಿ.ಪಿ ಲಿಜೀಶ್ ಎಂಬುವರನ್ನ ಬಂಧಿಸಲಾಗಿದೆ.
ಮೂರು ತಿಂಗಳ ಹಿಂದೆ ತಮ್ಮ ಮನೆಗೆ ನುಗ್ಗಿ ವಡಗರ ಮುಡಪ್ಪಿಲಾವ್ ನಲ್ಲಿರುವ ಮಹಿಳಾ ಕಾರ್ಯಕರ್ತೆಯೊಬ್ಬರ ಮನೆಯಲ್ಲಿ ಸಿಪಿಎಂ ಮುಳ್ಳಿಯೇರಿ ಶಾಖಾ ಕಾರ್ಯದರ್ಶಿ ಪುಲ್ಲುಲ್ಲಪರಂಬತ್ ಬಾಬುರಾಜ್ ಹಾಗೂ ಪದಿಯರಕ್ಕರ ಪ್ರದೇಶದ ಕಾರ್ಯದರ್ಶಿ ಟಿ.ಪಿ ಲಿಜೀಶ ಅತ್ಯಾಚಾರ ನಡೆಸಿರುವುದಾಗಿ ಮಹಿಳೆ ದೂರು ನೀಡಿದ್ದಳು.
ಈ ಘಟನೆಯನ್ನ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ರು ಎಂದು ಹೇಳಿದ್ದ ಮಹಿಳೆ, ನಂತರ ಪೊಲೀಸರನ್ನ ಸಂಪರ್ಕಿಸಿ ಕಳೆದ ಶನಿವಾರ ದೂರು ನೀಡಿದ್ರು. ಪ್ರಕರಣ ದಾಖಲಾದ ದಿನದಿಂದ ಆರೋಪಿಗಳಿಬ್ಬರು ನಾಪತ್ತೆಯಾಗಿದ್ದರು. ಇದೀಗ ಇವರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.