ಪ್ರಜಾಸ್ತ್ರ ಸುದ್ದಿ
ಇಂಡಿ: ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ರಾಯಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರ ಬಹುದೊಡ್ಡ ಗಲಾಟೆಯಾಗಿ ಕೊನೆಗೆ ಒಂದು ಇತ್ಯರ್ಥಕ್ಕೆ ಬರಲಾಗಿದೆ. ಆ ಘಟನೆ ಮಾಸುವ ಮುನ್ನವೇ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ ಮತ್ತೊಂದು ಘಟನೆ ನಡೆದಿದೆ.
ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿರುವ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಕಟೌಟ್ ಗೆ ಯಾರೋ ಕಿಡಿಗೇಡಿಗಳು ಕೆಸರು ಎರಚಿ ಅಪಮಾನ ಮಾಡಿದ್ದಾರೆ. ಗ್ರಾಮದ ರಾಯಣ್ಣ ಸರ್ಕಲ್ ನಲ್ಲಿರುವ ಬೃಹತ್ ಕಟೌಟನಲ್ಲಿರೋ ಕನಕದಾಸರು, ಚೆನ್ನಮ್ಮ ಭಾವಚಿತ್ರಕ್ಕೂ ಕೆಸರು ಬಳಿದಿದ್ದಾರೆ.
ಈ ಘಟನೆಯಿಂದಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ರು. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಇಂಡಿ ಗ್ರಾಮೀಣ ಠಾಣೆ ಪೊಲೀಸ್ರು ಕಿಡಿಗೇಡಿಗಳನ್ನ ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ರು. ಬಳಿಕ ಕಟೌಟ್ ಸ್ವಚ್ಛಗೊಳಿಸಿ ಪೂಜೆ ಮಾಡಲಾಯ್ತು.