ವಿಜಯಪುರ: ರೇಷ್ಮಾ ಪಡೇಕನೂರ್ ಹತ್ಯೆಗೆ ಸಂಬಂಧಿಸಿದ ಪೋಸ್ಟ್ ಮಾರ್ಟಮ್ ರಿಪೋರ್ಟ್ ಇನ್ನೂ ಬಂದಿಲ್ಲ. ಸಮ್ಮೀವುಲ್ಲಾ ಅದ್ಹೇಗೆ ಬಂದಿದೆ ಅಂತಾ ಹೇಳ್ತಾನೆ. ಆ ರಿಪೋರ್ಟ್ ಬರುವುದಕ್ಕೆ ಇನ್ನೂ 15 ದಿನಗಳು ಆಗುತ್ತದೆ ಅಂತಾ ವಿಜಯಪುರ ಎಸ್ಪಿ ಪ್ರಕಾಶ್ ನಿಕ್ಕಂ ಹೇಳಿದ್ದಾರೆ.
ಹತ್ಯೆ ಪ್ರಕರಣ ಭೇದಿಸಲು ಮೂರು ತಂಡಗಳನ್ನ ರಚಿಸಿದ್ದೇವೆ. ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ. ಆದಷ್ಟು ಬೇಗ ಆರೋಪಿಗಳನ್ನ ಬಂಧಿಸುತ್ತೇವೆ ಅಂತಾ ಸಿಎಂ ನಿಕ್ಕಂ ತಿಳಿಸಿದ್ದಾರೆ.