ಕೈ ನಾಯಕಿ ಹತ್ಯೆ ಹಿಂದೆ 8ರ ನಂಟು..!

521

ವಿಜಯಪುರ : ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ್ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸ್ ರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮಹಾರಾಷ್ಟ್ರದ ಎಂಐಎಂ ಮುಖಂಡ ತೌಫಿಕ್ ಶೇಕ್ ಹಾಗೂ ಆತನ ಕಾರು ಚಾಲಕ ಇಜಾಜ್ ಬಿರಾದಾರನನ್ನ ಬಂಧಿಸಲಾಗಿದೆ. ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆದಿದೆ.

ಆರೋಪಿಗಳಾದ ತೌಫಿಕ್ ಮತ್ತು ಇಜಾಜ್, ಹತ್ಯೆಯಾದ ಕೈ ನಾಯಕಿ ರೇಷ್ಮಾ

ಇಬ್ಬರು ಆರೋಪಿಗಳು ಕೊಲೆ ಹಿಂದಿನ ಸತ್ಯವನ್ನ ಬಾಯ್ಬಿಟ್ಟಿದ್ದಾರೆ. ಎಂಐಎಂ ಮುಖಂಡ ತೌಫಿಕ್ ಜೊತೆ ರೇಷ್ಮಾ ಅಕ್ರಮ ಸಂಬಂಧ ಹೊಂದಿದ್ದಳಂತೆ. ಹಣ ಹಾಗೂ ಆಸ್ತಿಗಾಗಿ ತೌಫಿಕ್ ಗೆ ಬ್ಲ್ಯಾಕ್ ಮೇಲ್ ಮಾಡ್ತಿದ್ದಳಂತೆ. ಇದ್ರಿಂದ ತೌಫಿಕ್ ಸಾಕಷ್ಟು ಬೇಸತ್ತು ಹೋಗಿದ್ದನಂತೆ.

ಆರೋಪಿ ತೌಫಿಕ್ ಶೇಕ್ ನ ಎಂಟು ಎಕರೆ ಆಸ್ತಿಯನ್ನ ತನ್ನ ಹೆಸರಿಗೆ ಬರೆಯುವಂತೆ ಪೀಡಿಸ್ತಿದ್ದಳಂತೆ. ಇದ್ರಿಂದ ಸಾಕಷ್ಟು ಬೇಸತ್ತು ಪ್ಲಾನ್ ಮಾಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಅಂತಾ ವಿಜಯಪುರ ಎಸ್ಪಿ ಪ್ರಕಾಶ್ ನಿಕ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!