ವಿಜಯಪುರ: ಕೇಂದ್ರ ಸರ್ಕಾರದಲ್ಲಿ ಲಿಂಗಾಯತರ ಕಡೆಗಣಿಸಲಾಗಿದೆ ಅಂತಾ ರಾಜ್ಯ ಗೃಹ ಸಚಿವ ಎಂ.ಬಿ ಪಾಟೀಲ್ ಆರೋಪಿಸಿದ್ದಾರೆ. ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಸುರೇಶ್ ಅಂಗಡಿ ನಡುವೆ ಕೇಂದ್ರ ಸರ್ಕಾರ ವ್ಯತ್ಯಾಸ ಮಾಡಿದೆ. ಇದು ಬಿಜೆಪಿಯ ಮನಸ್ಥಿತಿ ತೋರಿಸುತ್ತೆ ಅಂತಾ ವಾಗ್ದಾಳಿ ನಡೆಸಿದ್ದಾರೆ.
ಸುರೇಶ್ ಅಂಗಡಿ ಅವರಿಗೂ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಕೊಡಬೇಕಿತ್ತು. ಇದೊಂದು ದೊಡ್ಡ ಅನ್ಯಾಯವಾಗಿದೆ. ಸುರೇಶ್ ಅಂಗಡಿ ಕೇಂದ್ರದ ರಾಜ್ಯ ಸಚಿವರು. ಅವರು ಪ್ರಹ್ಲಾದ್ ಜೋಶಿ ಕಡೆ ನೋಡಬೇಕಾಗುತ್ತೆ. ಸುರೇಶ್ ಅಂಗಡಿ ಜಾಗದಲ್ಲಿ ನಾನು ಇದ್ದಿದ್ರೆ, ಸಚಿವ ಸ್ಥಾನ ತಿರಸ್ಕಾರ ಮಾಡ್ತಿದ್ದೆ ಅಂತಾ ಹೇಳಿದ್ದಾರೆ.