ಸಾಲ ಮನ್ನಾ ಹಣ ಮಾಯ..!

327

ಯಾದಗಿರಿ: ರಾಜ್ಯದ ಕೆಲ ಜಿಲ್ಲೆಗಳ ರೈತರ ಸಾಲ ಮನ್ನಾ ಮಾಡಿದ್ದ ಮೈತ್ರಿ ಸರ್ಕಾರ ಇದೀಗ ಉಲ್ಟಾ ಹೊಡೆದಿದೆ ಎನ್ನಲಾಗ್ತಿದೆ. ರೈತರ ಖಾತೆಗೆ ಜಮಾ ಮಾಡಿದ್ದ ಹಣ ವಾಪಸ್ ಪಡೆದಿರುವ ಘಟನೆ ಶಹಾಪುರದಲ್ಲಿ ನಡೆದಿದೆ.

ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಅವರ ಖಾತೆಗೆ ಹಣ ಜಮಾ ಮಾಡಿತ್ತು. ಆದ್ರೆ, ಇದೀಗ ಹಣ ವಾಪಸ್ಸಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಎಸ್ ಬಿಐ ಬ್ಯಾಂಕ್ ನಲ್ಲಿ ನಡೆದಿದೆ.

ಲೋಕಸಭಾ ಎಲೆಕ್ಷನ್ ಮೊದ್ಲು ಶಹಾಪುರ ತಾಲೂಕಿನ ಎಸ್ ಬಿಐ ಬ್ಯಾಂಕ್ ಖಾತೆಗೆ ಸುಮಾರು 200 ರೈತರ ಸಾಲ ಮನ್ನಾ ಹಣ ಜಮೆಯಾಗಿತ್ತು. ಆದರೆ ಚುನಾವಣೆಯ ಫಲಿತಾಂಶದ ಬಳಿಕ ಆ ಹಣ ವಾಪಸ್ ಹೋಗಿದೆ ಎಂದು ಕೇಳಿ ಬರುತ್ತಿದೆ. ಈ ಸಂಬಂಧ ರೈತರು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!