ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ಪ್ರಸಿದ್ಧ ಶ್ರೀ ಸಂಗಮೇಶ್ವರ ಜಾತ್ರಿ ಶುಕ್ರವಾರ ಮುಂಜಾನೆ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದ ಆವರಣದಿಂದ ತೇರನ್ನು ವಿವಿಧ ಮಠಾಧೀಶರು, ಮುಖಂಡರು, ಭಕ್ತರ ಸಮ್ಮುಖದಲ್ಲಿ ಎಳೆಯಲಾಯಿತು.
ದೇವಸ್ಥಾನದಿಂದ ನೀಲಗಂಗಾಮ್ಮಾ ದೇವಿ ಗುಡಿ ಮಾರ್ಗವಾಗಿ ಹಳೇ ಬಜಾರ್ ಮೂಲಕ ಹಾದು ಅಗಸಿಯಲ್ಲಿನ ಬಸವಣ್ಣದೇವರ ಗುಡಿಯ ತನಕ ತೇರನ್ನು ಎಳೆಯಲಾಗಿದೆ. ಅಲ್ಲಿಂದ ಅದೇ ಮಾರ್ಗವಾಗಿ ಪುನಃ ಎಳೆದುಕೊಂಡು ದೇವಸ್ಥಾನಕ್ಕೆ ಬರಲಾಗುತ್ತೆ.
ಇದೇ ವೇಳೆ ಭ್ರಮರಾಂಬಿಕ ದೇವಿಯ ಮೂರ್ತಿಯನ್ನು ಅಡ್ಡ ಪಲ್ಲಕ್ಕಿಯಲ್ಲಿಟ್ಟು ಉತ್ಸವ ನಡೆಸಲಾಗಿದೆ. ಸಾಕಷ್ಟು ಐತಿಹಾಸಿಕ ಹಿನ್ನಲೆ ಹೊಂದಿರುವ ದೇವಸ್ಥಾನವನ್ನು ಬ್ರಾಹ್ಮಣ ಹಾಗೂ ಹೂಗಾರ ಸಮುದಾಯದವರು ನೋಡಿಕೊಂಡು ಹೋಗುತ್ತಿದ್ದಾರೆ. ಎಲ್ಲ ಸಮುದಾಯದ ಭಕ್ತರು ಸಂಗಮೇಶ್ವರನನ್ನು ಪೂಜಿಸಿಕೊಂಡು ಬರುತ್ತಿದ್ದಾರೆ.