ಬೆಂಗಳೂರು: ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭಾಯ್ ಪಟೇಲ್ ಅವರ 114ನೇ ಜಯಂತಿಯನ್ನ ಇಂದು ದೇಶದ ತುಂಬಾ ಆಚರಣೆ ಮಾಡಲಾಗ್ತಿದೆ. ಅಲ್ದೇ, ಸರ್ದಾರ್ ಜಯಂತಿ ದಿನ ರಾಷ್ಟ್ರೀಯ ಏಕತಾ ಓಟವನ್ನ ಆಚರಿಸಿಕೊಂಡು ಬರಲಾಗ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ಏಕತೆಗಾಗಿ ಓಡಿದ್ರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಡಿಸಿಎಂ ಅಶ್ವಥನಾರಾಯಣ, ಸಚಿವ ಸಿ.ಟಿ ರವಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಏಕತಾ ಓಟದಲ್ಲಿ ಭಾಗವಹಿಸಿ ಓಡಿದ್ರು. ಈ ಮೂಲಕ ಉಕ್ಕಿನ ಮನಷ್ಯ ಖ್ಯಾತಿಯ ಸರ್ದಾರ್ ವಲ್ಲಭಾಯ್ ಪಟೇಲ್ ಅವರಿಗೆ ಗೌರವ ಸಲ್ಲಿಸಲಾಯ್ತು.