ವಿಜಯಪುರ: ಕರೋನಾ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ನಗರ ಕೆಲವು ಏರಿಯಾಗಳಲ್ಲಿ ರಾತ್ರೋ ರಾತ್ರಿ ಸೀಲ್ ಡೌನ್ ಮಾಡಲಾಗಿದೆ. ನಗರದ ಗೋಲಗುಮ್ಮಟ ಪ್ರದೇಶ, ಚಪ್ಪರ್ ಬಂದ್ ಕಾಲೋನಿ, ಬಡಿಕಮಾನ್ ಪ್ರದೇಶ ಸೇರಿದಂತೆ ಇತರೆ ಏರಿಯಾ ಸೀಲ್ ಡೌನ್ ಮಾಡಲಾಗಿದೆ.
ಎರಡು ಸಾವಿರಕ್ಕೂ ಅಧಿಕ ಕುಟುಂಬಗಳಿರುವ ಪ್ರದೇಶವನ್ನ ರಾತ್ರೋ ರಾತ್ರಿ ಸೀಲ್ ಡೌನ್ ಮಾಡಿದ್ದು, ಮನೆಯಿಂದ ಯಾರೂ ಆಚೆ ಬರಬಾರದೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಖಡಕ್ ಸೂಚನೆ ಕೊಟ್ಟಿದ್ದಾರೆ. ಅವಶ್ಯಕ ವಸ್ತುಗಳನ್ನ ಮನೆ ಬಾಗಿಲಿಗೆ ತಲುಪಿಸಲಾಗುತ್ತೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಚರ್ಚೆ
ನಗರದಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಅನ್ನೋ ಚರ್ಚೆ ಜೋರಾಗಿ ನಡೆದಿದೆ. ದೆಹಲಿಯಲ್ಲಿ ನಡೆದ ತಬ್ಲೀಗ್ ಜಮಾತ್ ದಲ್ಲಿ ಭಾಗವಹಿಸಿದವರಿಂದ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗ್ತಿದೆ. ಮಹಿಳೆಯೊಬ್ಬರಿಗೆ ಕರೋನಾ ಸೋಂಕು ತಗುಲಿದೆ ಎಂದು ಸಾರ್ವಜನಿಕರು ಮಾತ್ನಾಡಿಕೊಳ್ತಿದ್ದು, ಎರಡು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ರು ಎನ್ನಲಾಗ್ತಿದೆ. ಆದ್ರೆ, ಸೋಂಕಿನ ಬಗ್ಗೆ ಜಿಲ್ಲಾಧಿಕಾರಿಗಳು ಆಗ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾಗ್ಲಿ ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಸಧ್ಯದ ಪರಿಸ್ಥಿತಿಯಲ್ಲಿ ಯಾವುದನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ.
ಸಾಂದರ್ಭಿಕ ಚಿತ್ರ