ಸಿಂದಗಿ ಉಪ ಕದನ: 8 ಹುರಿಯಾಳುಗಳಲ್ಲಿ ಉಳಿಯೋದೆಷ್ಟು?

216

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಧಾನಸಭೆ ಉಪ ಚುನಾವಣೆಯ ಕಣ ರಂಗೇರಿದೆ. ತಾಲೂಕಿನ ಬಿಸಿಲಿನ ಜೊತೆಗೆ ಚುನಾವಣೆಯ ಬಿಸಿ ಸಹ ಹೆಚ್ಚಾಗುತ್ತಿದೆ. ಇದುವರೆಗೂ 8 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇವತ್ತು ನಾಮಪತ್ರ ವಾಪಸ್ ಪಡೆಯಲು ಇರುವ ಕೊನೆಯ ದಿನ. ಹೀಗಾಗಿ ಅಂತಿಮವಾಗಿ ಕಣದಲ್ಲಿ ಎಷ್ಟು ಜನ ಉಳಿಯುತ್ತಾರೆ ಅನ್ನೋ ಕುತೂಹಲ ಮೂಡಿದೆ.

ಕಾಂಗ್ರೆಸ್-ಅಶೋಕ ಮನಗೂಳಿ, ಬಿಜೆಪಿ-ರಮೇಶ ಭೂಸನೂರ, ಜೆಡಿಎಸ್-ನಾಜಿಯಾ ಶಕೀಲ ಅಂಗಡಿ, ಕೆಆರ್ ಎಸ್-ಡಾ.ಸುನೀಲಕುಮಾರ ಹಬ್ಬಿ, ಆರ್ ಎಸ್ಪಿ- ವಿಕ್ರಮ ರಮೇಶ ಪಂಡಿತ, ಪಕ್ಷೇತರ ಅಭ್ಯರ್ಥಿಯಾಗಿ ಅಬ್ದುಲ್ ರಹಿಮಾನ ಮಹಮ್ಮದ್ ಹನೀಫ್, ಜೀಲಾನಿ ಗುಡುಸಾಬ್ ಮುಲ್ಲಾ, ದೀಪಿಕಾ ಎಸ್.ಪಡಸಲಗಿ ಇವರು ನಾಮಪತ್ರ ಸಲ್ಲಿಸಿದ್ದಾರೆ.

ಅಕ್ಟೋಬರ್ 13 ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನವಾಗಿದೆ. ಅಕ್ಟೋಬರ್ 30ರಂದು ಮತದಾನ, ನವೆಂಬರ್ 2ರಂದು ಜಿಲ್ಲಾ ಕೇಂದ್ರದಲ್ಲಿ ಫಲಿತಾಂಶ ಪ್ರಕಟವಾಗಲಿದೆ.




Leave a Reply

Your email address will not be published. Required fields are marked *

error: Content is protected !!